ತೋಟದಲ್ಲೇ ಬೀಡುಬಿಟ್ಟ ಒಂಬತ್ತು ಕಾಡಾನೆ, ಅಡಿಕೆ-ಬಾಳೆ-ಕಾಫಿ ನಾಶ, ರೈತ ಕಂಗಾಲು
1 min read
ಚಿಕ್ಕಮಗಳೂರು: ತಾಲೂಕಿನ ವಸ್ತಾರೆ ಹೋಬಳಿಯಲ್ಲಿ ಸುಮಾರು ಒಂಬತ್ತು ಕಾಡಾನೆಗಳು ದಾಂದಲೆ ನಡೆಸುತ್ತಿದ್ದು ಹತ್ತಾರು ಎಕರೆ ಬೆಳೆ ಸಂಪೂರ್ಣ ನಾಶವಾಗಿದೆ. ವಸ್ತಾರೆ ಸಮೀಪದ ಸಂಸೆ, ಬಾಳೆಹಳ್ಳಿ, ಬಾರ್ಗಲ್, ಮುಳ್ಳುಂಡೆ, ಕೆಳಗೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಕಾಫಿ, ಅಡಿಕೆ-ಬಾಳೆ ಸಂಪೂರ್ಣ ನಾಶವಾಗಿದೆ. ಕಾಡಂಚಿನಲ್ಲೇ ಬೀಡು ಬಿಟ್ಟಿರೋ ಕಾಡಾನೆಗಳು ಬೇಕಾಬಿಟ್ಟಿ ದಾಳಿ ಮಾಡುತ್ತಿದ್ದು ರೈತರ ತೋಟಗಳಿಗೂ ಹೋಗದಂತಹಾ ಸ್ಥಿತಿ ನಿರ್ಮಾಣವಾಗಿದೆ. ಮೂರು ಮರಿ ಆನೆ. ಎರಡು ಗುಂಡು, ನಾಲ್ಕು ಹೆಣ್ಣಾನೆಗಳಿಂದ ಹತ್ತಾರು ಎಕರೆ ಬೆಳೆ ನಾಶವಾಗುತ್ತಿದೆ. ಸಕಲೇಶಪುರದಿಂದ ಬಂದಿರೋ ಕಾಡಾನೆಗಳು ಎಂದು ಹೇಳಲಾಗುತ್ತಿದೆ. ಸುಮಾರು ಐದಾರು ಕಿ.ಮೀ. ವ್ಯಾಪ್ತಿಯ ತೋಟಗಳಲ್ಲಿ ದಾಳಿ ಮಾಡುತ್ತಿರುವ ಕಾಡಾನೆಗಳ ಹಿಂಡು ಅಡಿಕೆ ಮರಗಳನ್ನ ಬುಡಸಮೇತ ಕಿತ್ತು ಹಾಕಿವೆ. ಬಾಳೆಯನ್ನೂ ಸಂಪೂರ್ಣ ನಾಶಮಾಡಿವೆ. ತೋಟದ ಗೇಟ್ ಎಲ್ಲವನ್ನೂ ಮುರಿದು ಹಾಕಿವೆ. ಜೀವಭಯದಿಂದ ಬೆಳೆಗಾರರು ಹಾಗೂ ರೈತರು ತೋಟಗಳಿಗೆ ಹೋಗೋದನ್ನೇ ಕೈಬಿಟ್ಟಿದ್ದಾರೆ. ಹೇಳಿದ ಎರಡು ಗಂಟೆಯ ನಂತರ ಬಂದ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟು ಆನೆಗಳನ್ನ ಕಾಡಿಗಟ್ಟಲು ಪಟಾಕಿ ಸಿಡಿಸುತ್ತಿದ್ದಾರೆ. ಆದರೆ, ಮರಿ ಆನೆಗಳು ಇರೋದ್ರಿಂದ ಆನೆಗಳು ಬೇಕಾಬಿಟ್ಟಿ ನುಗ್ಗುತ್ತಿದ್ದು, ಅಧಿಕಾರಿಗಳೂ ತೋಟದ ಕೋವಿಯಲ್ಲಿ ಈಗಾಗಲೇ ನಾಲ್ಕೈದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ, ಆನೆಗಳು ಹೋಗುವಂತೆ ಕಾಣುತ್ತಿಲ್ಲ. ಈ ಭಾಗದ ಸಣ್ಣ ಬೆಳೆಗಾರರು ಆನೆಗಳನ್ನ ಓಡಿಸಲು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ರೈತರು ಈ ರೀತಿ ಕಾಡಾನೆಗಳ ದಾಳಿಯಿಂದ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಶಾಸಕ ಎಂ.ಪಿ.ಕುಮಾರಸ್ವಾಮಿ ಮಂತ್ರಿ ಆಗೋದ್ರಲ್ಲಿ ಬ್ಯುಸಿ ಇದ್ದಾರೆ. ಅಧಿಕಾರಿಗಳಿಗೆ ಹೇಳಿದರೆ ಪಂಚಾಯಿತಿ ಹಾಗೂ ಇಲಾಖೆಗೆ ಅರ್ಜಿ ಹಾಕಬೇಕು ಅಂತಾರೆ
ಅರ್ಜಿ ಹಾಕಿದರೆ ಆನೆಗಳಿಗೆ ತಿಳಿದು ಅವು ವಾಪಸ್ ಹೋಗುತ್ತಾವಾ ಎಂದು ರೈತರು ಪ್ರಶ್ನಿಸಿದ್ದಾರೆ. ಇನ್ನು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇದಕ್ಕಿ ಗ್ರಾಮದಲ್ಲಿ ದಿನೇಶ್ ಹೆಬ್ಬಾರ್ ಎಂಬುವರಿಗೆ ಸೇರಿದ ತೋಟದಲ್ಲಿ ಕಾಡಾನೆಗಳು ದಾಂದಲೆ ನಡೆಸಿದ್ದು, ಅಡಿಕೆ ಮರಗಳನ್ನ ಕಿತ್ತು ಹಾಕಿವೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g