May 14, 2024

MALNAD TV

HEART OF COFFEE CITY

ಕೋರ್ಟ್ ತೀರ್ಪನ್ನ ಗೌರವಿಸದವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇರುತ್ತಾ : ಸಿ.ಟಿ.ರವಿ ಪ್ರಶ್ನೆ

1 min read

 

ಚಿಕ್ಕಮಗಳೂರು: ಸುಪ್ರಿಂಕೋರ್ಟ್ ತೀರ್ಪನ್ನ ಗೌರವಿಸದವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇರುತ್ತಾ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿ ಕಾರಿದ್ದಾರೆ. ನಗರದ ಮಾತನಾಡಿದ ಅವರು, ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದಡಿಯಲ್ಲೇ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ರಚನೆಯಾಗಿರುವುದು. ಸುಪ್ರೀಂಕೋರ್ಟ್ ಯಾವ-ಯಾವ ಸಮಯದಲ್ಲಿ ಎಷ್ಟು ಡೆಸಿಬಲ್ ಸೌಂಡ್ ಇರಬೇಕು ಎಂದು ತೀರ್ಪು ನೀಡಿದೆ. ಇಲ್ಲಿ ಆಜಾನ್ ವಿರುದ್ಧ ಯಾರು ಇಲ್ಲ. ಅದರ ಮೈಕಿನ ಸೌಂಡ್ ವಿರುದ್ಧ ಇರುವುದು. ಎಷ್ಟು ಬೇಕಾದರೂ ಹಾಕಬಹುದು ಎಂದು ಅವರು ಹೇಳುವುದಾದರೆ ಹೇಳಲಿ. ಆಗ ಅವರ ಮತೀಯವಾದದ ಹಿನ್ನೆಲೆ ಅರ್ಥವಾಗುತ್ತೆ ಎಂದರು. ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸದ ಜನ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇರುತ್ತಾ ಎಂದು ಖರ್ಗೆಗೆ ಪ್ರಶ್ನಿಸಿದ್ದಾರೆ.

ಕೋರ್ಟ್ ತೀರ್ಪನ್ನು ಅನುಷ್ಠಾನ ಮಾಡಬೇಕು-ಬೇಡವೋ ಅದನ್ನಾದರೂ ಸ್ಪಷ್ಟವಾಗಿ ಹೇಳಲಿ. ಕೋರ್ಟ್ ತೀರ್ಪನ್ನ ಅನುಷ್ಠಾನ ಮಾಡುವುದು ಬೇಡ ಎಂದಾದರೆ ಅಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಮತೀಯವಾದದ ನೀತಿಯನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಪಸಂಖ್ಯಾತರ ವೋಟ್ ಬ್ಯಾಂಕಿಗೆ ಕಾಂಪಿಟೇಟರ್‍ಗಳು ಜಾಸ್ತಿಯಾಗಿದ್ದಾರೆ. ಎಲ್ಲಿ ಇರುವ ವೋಟ್ ಬ್ಯಾಂಕ್ ಕೂಡ ಕಳೆದುಕೊಳ್ಳುತ್ತೇವೆ ಎಂದು ಭಯ. ಅದಕ್ಕಾಗಿ ಕೋರ್ಟ್ ತೀರ್ಪಿನ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು. ಭಜನೆ ಮಾಡುವವರು ಭಯೋತ್ಪಾದಕರು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಅವರದ್ದೇ ಶಾಸಕರ ಮನೆಗೆ ಬೆಂಕಿ ಹಾಕಿದವರು ಭಯೋತ್ಪಾದಕರು ಎಂದು ಹೇಳಲಿಲ್ಲ. ಅವರ ಪಕ್ಷದ ಶಾಸಕರಿಗೆ ರಕ್ಷಣೆ ಕೊಡಲು ಆಗದಂತಹ ಕೆಟ್ಟ ಸ್ಥಿತಿಗೆ ಕಾಂಗ್ರೆಸ್ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಭಜನೆಯಿಂದ ಈವರೆಗೂ ಭಯೋತ್ಪಾದನೆ ನಡೆದೇ ಇಲ್ಲ. ಓಲೈಕೆ ರಾಜಕಾರಣಕ್ಕಾಗಿ ಈ ರೀತಿ ಹೇಳುತ್ತಾ-ಹೇಳುತ್ತಾ ಡಿಪಾಸಿಟ್ ಕಳೆದುಕೊಳ್ಳುವ ಹಂತಕ್ಕೆ ಕಾಂಗ್ರೆಸ್ ಬಂದಿದೆ. 377 ಸ್ಥಾನಗಳಲ್ಲಿ ಕಾಂಗ್ರೆಸ್ ಡಿಪಾಸಿಟ್ ಕಳೆದುಕೊಳ್ಳಲು ಇದು ಒಂದು ಕಾರಣ ಎಂದು ಲೇವಡಿ ಮಾಡಿದ್ದಾರೆ. ಕರ್ನಾಟಕದಲ್ಲೂ ಅವರು ತೀರ್ಮಾನ ಮಾಡಿರಬೇಕು. ಮಹಾತ್ಮ ಗಾಂಧಿಯವರ ಆಶಯ ಕಾಂಗ್ರೆಸ್ಸನ್ನು ವಿಸರ್ಜಿಸಬೇಕು ಎಂಬುದನ್ನು ಜನರಿಗೆ ಬಿಡಬೇಕು ಎಂಬುದು. ಅದಕ್ಕಾಗಿಯೇ ಹೀಗೆಲ್ಲ ಹೇಳಿಕೆ ಕೊಡುತ್ತಿದ್ದಾರೆ. ಕೇಡುಗಾಲಕ್ಕೆ ಹುಂಜ ಮೊಟ್ಟೆ ಇಟ್ತು ಎಂಬಂತೆ ಕಾಂಗ್ರೆಸ್ ಕೇಡುಗಾಲಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!