ರಾಷ್ಟ್ರೀಯತೆಯ ವಿಚಾರಧಾರೆಯೊಂದೇ ಬಿಜೆಪಿ ಕೆಲಸ ಭಾನುಪ್ರಕಾಶ್
1 min readಚಿಕ್ಕಮಗಳೂರು: ಕಳೆದ 50 ವರ್ಷಗಳಿಂದ ಭಾರತೀಯ ಜನತಾ ಪಕ್ಷವು ರಾಷ್ಟ್ರೀಯತೆ ಎನ್ನುವ ಒಂದೇ ವಿಚಾರಧಾರೆಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ. ಈ ಕಾರ್ಯಕ್ಕೆ ಜೀವ, ಶಕ್ತಿ, ಭಾವನೆಗಳನ್ನು ತುಂಬುವ ಕೆಲಸ ಕಾರ್ಯಕರ್ತರು, ಮುಖಂಡರಿಂದ ಆಗಬೇಕೆಂದು ರಾಜ್ಯ ಪ್ರಕೋಷ್ಠಗಳ ಸಂಯೋಜಕ ಭಾನುಪ್ರಕಾಶ್ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಸರ್ಕಾರ ಮತ್ತು ಪಕ್ಷದ ಅಳತೆಗೋಲು ಬೇರೆ. ಸಂಘಟನೆ ವಿಚಾರದಲ್ಲಿ ಎಲ್ಲಾ ಭಾಗಗಳಿಗೆ ನೇಮಕ ಆಗಿದೆಯಾ, ಎಲ್ಲಾ ಕಾರ್ಯಕರ್ತರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆಯೇ, ನಾವು ಮಾಡುತ್ತಿರುವ ಕೆಲಸ ಸರಿಯಾಗಿದೆಯಾ, ಜನಕ್ಕೆ ತಲುಪುತ್ತಿದೆಯಾ, ಅಲ್ಲಿಂದ ಸ್ಪಂದನೆ ಸಿಗುತ್ತಿದೆಯಾ ಎನ್ನುವುದನ್ನು ಸದಾ ಗಮನಿಸುತ್ತಿರಬೇಕಾಗುತ್ತದೆ ಎಂದರು.
ಸರ್ಕಾರದ ಯೋಜನೆಗಳನ್ನು ಜನರಿಗೆ ಹೇಳಬೇಕಾಗುತ್ತದೆ. ಅಗತ್ಯ ಬಿದ್ದಾಗ ಅದನ್ನು ಸಾಬೀತುಪಡಿಸಬೇಕಾಗುತ್ತದೆ. ನಮ್ಮದು ಜವಾಬ್ದಾರಿಯುತವಾದ ಆಡಳಿತ ಪಕ್ಷ, ಕಾಂಗ್ರೆಸಿಗರು ನಾವು ಇನ್ನೂ ಆಡಳಿತ ಪಕ್ಷದವರೇ ಅಂದುಕೊಂಡು ವಿರೋಧ ಪಕ್ಷದಲ್ಲಿದ್ದಾರೆ. ಬಿಜೆಪಿಯ ನಾವು ಆಡಳಿತ ಪಕ್ಷದಲ್ಲಿದ್ದುಕೊಂಡು ಇನ್ನೂ ವಿರೋಧ ಪಕ್ಷದಲ್ಲಿದ್ದೇವೆಂದು ಕೊಂಡಿದ್ದೇವೆ. ಸಮಸ್ಯೆ ಇರುವುದು ಇಲ್ಲಿ. ಇದನ್ನು ನಾವು ಸರಿಪಡಿಸಿಕೊಳ್ಳಬೇಕೆಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g