ಕೆರೆಗೆ ಬಿದ್ದು ಯುವಕ ಸಾವು
1 min readಕೊಟ್ಟಿಗೆಹಾರ:ಕೆರೆಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಬಣಕಲ್ ಠಾಣಾ ವ್ಯಾಪ್ತಿಯ ಛೇಗು ಗ್ರಾಮದಲ್ಲಿ ನಡೆದಿದೆ.
ಛೇಗು ಗ್ರಾಮದ ಪ್ರಮೋದ್ (21) ಎಂಬ ಯುವಕ ಶುಕ್ರವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದು ಶನಿವಾರ ಬೆಳಿಗ್ಗೆಯಾದರೂ ಕೂಡ ಮನೆಗೆ ಹಿಂದಿರುಗದೇ ಇದುದ್ದರಿಂದ ಮನೆಯವರು ಹುಡುಕಾಟ ನಡೆಸಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆಗೆ ಛೇಗು ಗ್ರಾಮದ ಕೆರೆಯೊಂದರ ಬಳಿ ಯುವಕನ ಚಪ್ಪಲಿ ಪತ್ತೆಯಾಗಿದ್ದು ಯುವಕನ ಮನೆಯವರು ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಸ್ಥಳೀಯರು ಕಾರ್ಯಾಚರಣೆ ನಡೆಸಿ ಕೆರೆಯಲ್ಲಿದ್ದ ಯುವಕನ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.
ಈ ಸಂದರ್ಭದಲ್ಲಿ ಬಣಕಲ್ ಠಾಣೆ ಪಿಎಸ್ಐ ಗಾಯತ್ರಿ, ಎಎಸ್ಐ ಶಶಿ, ಸಿಬ್ಬಂದಿಗಳಾದ ಸಚ್ಚಿನ್, ವಿನಯಕುಮಾರ್, ವಿಪತ್ತು ನಿರ್ವಹಣಾ ತಂಡದ ಸಂಯೋಜಕ ರವಿಕುಮಾರ್, ಕಾರ್ಯಕರ್ತರಾದ ಜಗದೀಶ್, ಆರೀಪ್, ಅಶ್ವತ್ ಬೆಟ್ಟಗೆರೆ, ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿಗಳು, ಛೇಗು ಗ್ರಾಮಸ್ಥರು ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g