May 16, 2024

MALNAD TV

HEART OF COFFEE CITY

ರಾಷ್ಟ್ರೀಯ ಪಕ್ಷಗಳಿಂದ ಸರ್ವ ಜನಾಂಗದ ತೋಟಕ್ಕೆ ಬೆಂಕಿ ಇಡುವ ಕೆಲಸ: ಹೆಚ್.ಡಿ ಕುಮಾರಸ್ವಾಮಿ

1 min read

 

ಚಿಕ್ಕಮಗಳೂರು: ರಾಜ್ಯದಲ್ಲಿ ರಾಮನ ಹೆಸರಿನಲ್ಲಿ ರಾವಣ ರಾಜ್ಯ ಮಾಡಲು ಸರ್ಕಾರ ಹೊರಟಿದೆ ಎಂದು ಮಾಜಿ ಸಿ.ಎಂ ಕುಮಾರಸ್ವಾಮಿ ಹೇಳಿದರು.ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಹುಬ್ಬಳ್ಳಿ ಗಲಾಟೆಯ ಕುರಿತು ಪ್ರತಿಕ್ರಿಯಿಸಿದ ಅವರು ಕತ್ತಿ ಕಡ್ಕೊಂಡು ರಾಜಕಾರಣ ಮಾಡುವುದಲ್ಲ, ರಾಮನ ಹೆಸರನ್ನು ಕತ್ತಿ ಹಿಡಿದು ಉಳಿಸುವುದಲ್ಲ ರಾಮ ಯಾವ ಸಂದೇಶವನ್ನು ನೀಡಿದ್ದಾನೆ ಎಂಬುದನ್ನು ಅರಿತು ಮಾನವೀಯತೆಯನ್ನು ಮೊದಲು ಕಲಿಯಬೇಕು ಬಿಜೆಪಿಯವರಿಂದ ನಾನು ಕಲಿಯಬೇಕಿಲ್ಲ ನನಗೆ ಜನರು ಬದುಕು ಮುಖ್ಯ ಎಂದರು.

ಇದೇ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ನಾಡಿನ ಬಗ್ಗೆ ಗೌರವ ಇದ್ದರೆ ಎಲ್ಲಾ ಧರ್ಮದ ಸ್ವಾಮೀಜಿಗಳನ್ನು ಕರೆದು ಅವರ ಸಮ್ಮುಖದಲ್ಲಿ ಭಾವೈಕ್ಯತೆ ಸರಿಪಡಿಸಿ ಜನತೆಗೆ ಹೊಸ ಸಂದೇಶವನ್ನು ಕೊಡಬೇಕು ಎಂದರು.

ರಾಜ್ಯದಲ್ಲಿ ಉತ್ತರ ಪ್ರದೇಶ,ಗುಜರಾತ್ ಆಡಳಿತ ಅವಶ್ಯಕತೆ ಇಲ್ಲ, ಕರ್ನಾಟಕದ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ ಮತಕ್ಕೊಸ್ಕರ ಆಶಾಂತಿ ಮೂಡಿಸುವ ಕೆಲಸವಾಗಬಾರದು ರಾಷ್ಟ್ರೀಯ ಪಕ್ಷಗಳಿಂದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕೆಲಸವಾಗುತ್ತಿದೆ ಬಿಜೆಪಿಗೆ 150 ಸೀಟ್ ತಗೆದುಕೊಳ್ಳುವ ಚಿಂತೆ, ಕಾಂಗ್ರೆಸ್ ಗೆ ಯಾರನ್ನು ಜೈಲಿಗೆ ಕಳುಹಿಸಬೇಕು ಅಂತಾ ಚಿಂತೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿಕಾರಿದ್ರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!