May 15, 2024

MALNAD TV

HEART OF COFFEE CITY

ಹಿಂದೂ ಕುಂಭಾಭಿಷೇಕಕ್ಕೆ ಮಸೀದಿಯಿಂದ ಶುಭ ಹಾರೈಕೆ,

1 min read

ಚಿಕ್ಕಮಗಳೂರು : ಪ್ರಸ್ತುತ ಸಮಾಜದಲ್ಲಿ ಧರ್ಮ ಯುದ್ಧದ ಕಹಳೆ ಕೂಗು ಜೋರಿದೆ. ನಾವೇ ಶ್ರೇಷ್ಠ ಹಾಗೂ ಸಮಾನತೆಯ ಪಾಠದ ಮಧ್ಯೆ ಸಾವು-ನೋವು ಕೂಡ ಸಂಭವಿಸುತ್ತಿದೆ. ಆದರೆ, ಇಂತಹಾ ಧರ್ಮಯುದ್ಧ ದ ಕಾಲದಲ್ಲಿ ಮುಸ್ಲಿಂ ಸಮುದಾಯ ಮಸೀದಿ ಮುಂದೆ ಹಿಂದೂಗಳ ಕುಂಬಾಭಿಷೇಕಕ್ಕೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿ ಸಮಾನತೆ ಸಾರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ಆದಿ ಶಂಕರಾಚಾರ್ಯರ ಮಹಾ ಕುಂಬಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಜುಮ್ಮಾಮಸೀದಿಯಿಂದ ಮಸೀದಿ ಮುಂದೆ ಫ್ಲೆಕ್ಸ್ ಹಾಕಿ ಕುಂಬಾಭಿಷೇಕಕ್ಕೆ ಶುಭಕೋರಿದ್ದಾರೆ. ಫ್ಲೆಕ್ಸ್ ನಲ್ಲಿ ಹರಿಹರಪುರ ಮಠದ ಸ್ವಾಮೀಜಿಗಳಾದ ಸಚ್ಚಿದಾನಂದ ಸರಸ್ವತಿ ಶ್ರೀಗಳ ಫೋಟೋ ಹಾಕಿ, ಆ ಫ್ಲೆಕ್ಸ್ ನ ಮಸೀದಿ ಕಾಂಪೌಂಡ್ ಮೇಲೆ ಹಾಕಿ ಕುಂಬಾಭಿಷೇಕಕ್ಕೆ ಶುಭಹಾರೈಸಿದ್ದಾರೆ. ಮುಸ್ಲಿಮರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಮೆಚ್ವುಗೆ ವ್ಯಕ್ತವಾಗುತ್ತಿದ್ದು, ಮುಸ್ಲಿಮರಲ್ಲೂ ಒಳ್ಳೆಯವರು, ಸಮಾನತೆ ಸಾರುವವರು ಇದ್ದಾರೆ ಎಂದು ಸ್ಥಳಿಯರು ಮುಸ್ಲಿಂ ಸಮುದಾಯದ ಬಗ್ಗೆ ಸಂತಸ ತೋರಿದ್ದಾರೆ.

ಒಟ್ಟಾರೆ, ಸದ್ಯ ರಾಜ್ಯದಲ್ಲಿ ಧರ್ಮ ದಂಗಲ್ ನಡೆಯುತ್ತಿದೆ. ಜಾತಿ, ಧರ್ಮ, ಹಿಜಬ್, ಹಲಾಲ್ ಕಟ್, ಜಟ್ಕಾ ಕಟ್ ಹಾಗೇ ಹೀಗೆ ಎಂದು ಸಮಾಜ ಹೊಡೆಯುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಹೀಗಿರುವಾಗ ಎಲ್ಲಾ ಧರ್ಮದಲ್ಲೂ ಸಮಾನತೆ ಸಾರುವವರು ಇದ್ದಾರೆ ಎಂಬುದನ್ನು ಕಾಫಿನಾಡಿಗರು ಸಮಾನತೆ ಸಾರಿದ್ದಾರೆ. ಮಸೀದಿ ಮುಂದೆ ಮಠದ ಕಾರ್ಯಕ್ರಮ ಫೆಕ್ಸ್ ಹಾಕಿ ಸಮಾನತೆ ತೋರಿರುವುದು ನಿಜ್ಜಕ್ಕೂ ಸಮಾಜ ಮೆಚ್ಚುವಂತಹದ್ದು…

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!