May 19, 2024

MALNAD TV

HEART OF COFFEE CITY

ಮಠದ ಮನೆ_ಬಡಾಮಕಾನ್ ಆಸ್ತಿ ವಿವಾದ, ವಿರೋಧದ ನಡುವೆಯೂ ಸರ್ವೇ ಕಾರ್ಯ

1 min read

ಮಠದ ಮನೆಯವರು ಹಾಗೂ ಬಡಾಮಕಾನ್ ನಡುವಿನ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಇಂದು ನಗರಸಭೆ ಸರ್ವೇ ಕಾರ್ಯ ನಡೆಸುವ ವೇಳೆ ಆಕ್ರೋಶ ವ್ಯಕ್ತವಾಗಿದೆ. ನೂರಾರು ಜನ ಮುಸ್ಲೀಂ ಸಮುದಾಯದವರು ಯಾವುದೇ ಕಾರಣಕ್ಕೂ ಜೆಸಿಬಿ,ಹಿಟಾಚಿ ಬಳಸದೇ ಕಾರ್ಯಾಚರಣೆ ಮಾಡದೇ ಕೇವಲ ಸರ್ವೇ ನಡೆಸಬೇಕು ಎಂದು ಆಗ್ತಹಿಸಿದ್ರು.‌ಜೆಸಿಬಿಯನ್ನು ಗೇಟಿನ ಒಳಗೆ ಬಿಡದೇ ಬಸವನಹಳ್ಳಿ ರಸ್ತೆಯಲ್ಲಿ

ಪ್ರತಿಭಟನೆ ನಡೆಸಿದ್ರು.

 

ಈ ನಡುವೆ ವಿರೋಧದ ನಡುವೆಯೇ ಸರ್ವೇ ಕಾರ್ಯ ನಡೆಸುವ ಜೊತೆಗೆ ಮಠದ ಮನೆಯ ಜಾಗದಲ್ಲಿದ್ದ ಗಿಡಗಂಟೆ ತೆರವುಗೊಳಿಸಲಾಯಿತು.

 

 

 

 

 

ಕಳೆದ ಕೆಲವು ದಿನಗಳ ಹಿಂದೆ ಜಾಗವನ್ನು ಸರ್ವೇ ನಡೆಸುವಂತೆ ಮಠದ ಮನೆಯವರ ಆಡಳಿತ ಮಂಡಳಿಯ ನಂಜಪ್ಪ ಎನ್ನುವರಿಂದ ನಗರಸಭೆ ಹಾಗೂ ತಾಲೂಕು ಕಚೇರಿಗೆ ಮನವಿ ಸಲ್ಲಿಸಲಾಗಿತ್ತು

ಈ ಹಿನ್ನೆಲೆ ನಗರಸಭೆ ಹಾಗೂ ಕಂದಾಯ ಇಲಾಖೆಯಿಂದ ಒಂದು ಕಡೇ ಸರ್ವೇ ಕಾರ್ಯ ನಡೆಯುತ್ತಿದ್ರೆ, ಮತ್ತೊಂದು ಕಡೆ ಪ್ರತಿಭಟನೆ ನಡೆಸಲಾಯಿತು.

 

4 ದಶಕದಿಂದ ಈ ಜಾಗ ವಿವಾದದ ಕೇಂದ್ರವಾಗಿದ್ದು ಇದನ್ನು ಸರ್ವೇ ಮಾಡಲು ಮುಂದಾದ ಹಿನ್ನೆಲೆ ಆಕ್ರೋಶ ಉಂಟಾಗುದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.

 

ಸ್ಥಳದಲ್ಲಿ ಎಸಿ ನಾಗರಾಜ್, ತಹಶೀಲ್ದಾರ್ ಕಾಂತರಾಜ್, ಎಎಸ್ಪಿ ಶೃತಿ ಮೊಕ್ಕಾ ಹೂಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!