May 8, 2024

MALNAD TV

HEART OF COFFEE CITY

ಆಕಸ್ಮಿಕ ವಿದ್ಯುತ್ ಗೆ ಯುವಕ ಸಾವು

1 min read

 

 

ಕೊಪ್ಪ: ಆಕಸ್ಮಿಕ‌ವಾಗಿ ವಿದ್ಯುತ್ ತಗುಲಿ ಯುವಕ ಮತಪಟ್ಟ ದಾರುಣ ಘಟನೆ ಕೊಪ್ಪದ ಕುಂಚೂರು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ‌.

 

ಕುಂಚೂರು ಗ್ರಾಮ ಸಮೀಪದ ದೇವರಕೊಡಿಗೆ ಕೃಷಿಕ ಸತೀಶ್ ಎಂಬುವವರ ಪುತ್ರ ಸಚಿನ್ (30) ಮೃತ ದುರ್ದೈವಿ. ಮನೆಯ ಸಮೀಪ ನಡೆದು ಬರುತ್ತಿದ್ದಾಗ ಟ್ರಾನ್ಸ್ ಫಾರ್ಮರ್ ನಲ್ಲಿ ಆಕಸ್ಮಿಕವಾಗಿ ಪ್ರವಹಿಸಿದ ವಿದ್ಯುತ್ ತಗುಲಿ ಯುವಕ ಮೃತಪಟ್ಟಿದ್ದಾರೆ.

 

ಸ್ಥಳೀಯರು ತಕ್ಷಣವೇ ಅವರನ್ನು ಕೊಪ್ಪ ಸಾರ್ವಜನಿಕ‌ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

 

ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಸಾಕಷ್ಟು ಜನರು‌ ಜಮಾಯಿಸಿದ್ದರು. ಸಚೀನ್ ಕೊಪ್ಪದಲ್ಲಿ ಸಾಕಷ್ಟು ಸ್ನೇಹಿತರ ವಲಯವನ್ನು ಹೊಂದಿದ್ದು, ಕುಟುಂಸ್ಥರು, ಸಂಬಂಧಿಕರು, ಸ್ನೇಹಿತರು ಕಣ್ಣೀರಿಡುತ್ತಿದ್ದಾರೆ. ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!