ಮಣೇವು ಕುಣಿತಕ್ಕೆ ಹಳ್ಳಿಗರ ಜೊತೆ ಹೆಜ್ಜೆ ಹಾಕಿದ ಮಾಜಿ ಶಾಸಕ ವೈ.ಎಸ್.ವಿ.ದತ್ತ
1 min read
ಚಿಕ್ಕಮಗಳೂರು. ದೇವರಮೂರ್ತಿ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಹಳ್ಳಿಗರ ಜೊತೆ ಮಣೇವು ಕುಣಿತಕ್ಕೆ ಹೆಜ್ಜೆಹಾಕಿ ಸಂಭ್ರಮಿಸಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಬಿದಿರೆ ಗ್ರಾಮದ ಕರಾಳಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ದತ್ತ ಕುಣಿದು ಕುಪ್ಪಳಿಸಿದ್ದಾರೆ. ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಈ ಹಿಂದೆ ಕೂಡ ಹಲವು ಬಾರಿ ಮಕ್ಕಳಿಗೆ ಪಾಠ ಮಾಡಿ, ಗಾಂಧಿ ಜಯಂತಿಯಂದು ದಲಿತರ ಮನೆ ಶೌಚಾಲಯಗಳನ್ನ ಶುಚಿ ಮಾಡಿ ಗಮನ ಸೆಳೆದಿದ್ದರು. ನಾನು ಮಕ್ಕಳಿಗೆ ಪಾಠ ಮಾಡೋದಕ್ಕೂ ಸೈ, ರಸ್ತೆ ಮಧ್ಯೆ ಕುಣಿಯೋದಕ್ಕೂ ಸೈ ಅನ್ನೋದನ್ನ ಸಾಬೀತು ಮಾಡಿದ್ದಾರೆ.
ಆಧುನಿಕ ಭಾರತದಲ್ಲಿ ಬಹುತೇಕ ರೂಢಿ ಸಂಪ್ರದಾಯಗಳು ಕ್ರಮೇಣ ಕಣ್ಮರೆಯಾಗುತ್ತಿದೆ. ಅದರಲ್ಲಿ ಮಣೇವು ಕುಣಿತ ಕೂಡ ಒಂದು. ಗ್ರಾಮೀಣ ಭಾಗದ ಅಲ್ಲಲ್ಲೇ ಜೀವಂತವಾಗಿದೆ. ದೇವರ ಉತ್ಸವಮೂರ್ತಿ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಅಲ್ಲೇ ಇದ್ದ ಶಾಸಕ ದತ್ತ ದೇವರಿಗೆ ಕಾಣಿಕೆ ನೀಡಿ ಹೆಗಲಮೇಲಿದ್ದ ಟವೆಲ್ನ ಕೈನಲ್ಲಿಟ್ಟುಕೊಂಡು ಸ್ಥಳಿಯರ ಜೊತೆ ರಸ್ತೆ ಮಧ್ಯೆಯೇ ಹೆಜ್ಜೆ ಹಾಕಿದ್ದಾರೆ. ತಮಟೆ ಸದ್ದನ್ನ ಆಲಿಸಿ ತಮಟೆಯ ಸದ್ದಿಗೆ ಕರೆಕ್ಟಾಗಿ ಸ್ಟೆಪ್ ಹಾಕಿ ನೆರೆದಿದ್ದವರನ್ನೂ ರಂಜಿಸಿದ್ದಾರೆ. ಮಣೇವು ಕುಣಿತ ಮುಗಿದ ಬಳಿಕ ಮತ್ತೆ ದೇವರಿಗೆ ನಮಸ್ಕರಿಸಿದ್ದಾರೆ. ಬಿದರೆ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ದತ್ತ ಮಣೇವು ಕುಣಿತಕ್ಕೆ ಸ್ಥಳಿಯರ ಜೊತೆ ಹೆಜ್ಜೆ ಹಾಕುತ್ತಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g