May 6, 2024

MALNAD TV

HEART OF COFFEE CITY

ಉದಾರತೆ ಮತ್ತು ಜಾತ್ಯಾತೀತ ಪದಗಳಿಂದ ಹಿಂದೂಗಳಿಗೆ ಮೋಸ:ಸಿ.ಟಿ ರವಿ

1 min read

ಚಿಕ್ಕಮಗಳೂರು: ನಮಗೆ ಯಾರು ಉದಾರತೆ ಪಾಠ ಹೇಳುವುದು ಬೇಡ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧವನ್ನು ಸಮರ್ಥಿಸಿಕೊಂಡರು.ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಂಗೊಳ್ಳಿಯಲ್ಲಿ ಮೀನು ತೆಗೆ ದುಕೊಳ್ಳಬೇಡಿ ಎಂದರು. ಹಿಂದೂಗಳು ಮಟನ್ ಸ್ಟಾಲ್‍ನಲ್ಲಿ ಮುಸ್ಲಿಂಮರು ಮಟನ್ ತೆಗೆದುಕೊಳ್ಳುತ್ತಾರಾ? ಅವರ ದೇವರಿಗೆ ಹಿಂದೂ ಮಟನ್ ಸ್ಟಾಲ್ ಆಗಲ್ಲ, ಅವರ ದೇ ವರಿಗೆ ಒಪ್ಪಿಸಿದನ್ನು ನಮ್ಮ ದೇವರು ಒಪ್ಪಿಕೊಳ್ಳುತ್ತಾ ಎಂದು ಪ್ರಶ್ನಿಸಿದರು.ಉದಾರತೆ ಮತ್ತು ಜಾತ್ಯಾತೀತ ಪದ ಹಿಂದೂಗಳಿಗೆ ಮೋಸ ಮಾಡಲು ಇಟ್ಟಿರುವುದು. ಡಾ|ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜಾತ್ಯಾತೀತ ಪದ ತಂದಿಡಲಿಲ್ಲ, ಕಾಂಗ್ರೆಸ್‍ನವರು ತುರ್ತು ಪರಿಸ್ಥಿತಿಯಲ್ಲಿ ತಂದಿಟ್ಟರು. ಈ ಶಬ್ಧ ಇರಬೇಕೋ ಬೇಡವೋ ಎಂಬ ಚರ್ಚೆಯಾಗಬೇಕು ಎಂದರು.
ಮಹಾತ್ಮ ಗಾಂಧಿ ಹಿಂದೂಗಳ ಭಜನೆಯಲ್ಲಿ ಈಶ್ವರ ಅಲ್ಲ ತೇರೆನಾಮ್ ಅಂತ ಹೇಳಿ ದರು. ಎಲ್ಲಾ ದೇವಸ್ಥಾನಗಳಲ್ಲಿ ಈ ಭಜನೆ ಹೇಳುತ್ತೇವೆ. ಯಾವುದಾದರೂ ಒಂದು ಮಸೀದಿಯಲ್ಲಿ ಹೇಳಿದ್ದಾರಾ? ಒಬ್ಬ ಮೌಲ್ವಿ, ಮುಸ್ಲಿಂ ಧರ್ಮಗುರು ದೇವನೊಬ್ಬ ನಾಮ ಹಲವು ಅಂತಾ ಹೇಳಿದ್ದು ಕೇಳಿದ್ದೀರಾ ಅವರಿಗೆ ಬಹುತ್ವವನ್ನು ಒಪ್ಪಿಕೊಳ್ಳಲು ಆಗಲ್ಲ, ಹಾಗಾದರೇ ನಮ್ಮಗೆ ಯಾಕೆ ಮೋಸ ಮಾಡಬೇಕು ಎಂದರು.

ಮುಸ್ಲಿಂಮರು ಕಮ್ಯೂನಲ್ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಇಸ್ಲಾಂನಲ್ಲಿ ಜಾತ್ಯಾತೀತ ಪದಕ್ಕೆ ಅರ್ಥ ಇದೆಯಾ. ಅರ್ಥ ಇದೆ ಅನ್ನುವ ಹಾಗಿದ್ದರೇ ಐದು ಬಾರೀ ನಮಾಜ್‍ನಲ್ಲಿ ಏನಂತ ಕೂಗುತ್ತಾರೆ? ಅಲ್ಲಾ ಒಬ್ಬನೇ ದೇವರು ಅಂತ ಕೂಗ್ತಾರೋ ಇ ಲ್ವೋ ಎಂದು ಪ್ರಶ್ನಿಸಿದ ಅವರು ಅಲ್ಲಾ ಒಬ್ಬನೇ ದೇವರು ಎಂದು ಎಲ್ಲಿ ಕೂಗೋದು ರಾಮ, ಈಶ್ವರ ಕೃಷ್ಣ ಹುಟ್ಟಿದ ಜಾಗದಲ್ಲಿ ಅದನ್ನು ಕೇಳಿಸಿಕೊಂಡು ಸುಮ್ಮನಿರಬೇಕಾ ನಾವು ಜಾತ್ಯಾತೀತ ಅವರು ಕಮ್ಯೂನಲ್ ಆಗಬೇಕಾ ಎಂದರು.
ಅವರು ಹಿಂದೂಗಳ ಅಂಗಡಿಯಲ್ಲಿ ವ್ಯಾಪಾರ ಮಾಡಬಾರದು, ಹಿಂದೂಗಳು ಅವರ ಅಂಗಡಿಯಲ್ಲಿ ವ್ಯಾಪಾರ ಮಾಡಬೇಕು. ನಮ್ಮ ಮೂಲ ನಂಬಿಕೆ ದೇವನೊಬ್ಬ ನಾಮ ಹಲವು ಅದು ಇಸ್ಲಾಂನಲ್ಲೂ ಇದ್ದಿದ್ದರೇ ಜಗಳನೇ ಜರುತ್ತಿರಲಿಲ್ಲ. ಶೇ.90ರಷ್ಟು ಹಿಂದು ಗಳು ಇರುವ ಕಡೆ ಶೇ.10ರಷ್ಟು ಇವರು ಮುಸ್ಲಿಂ ಸುರಕ್ಷಿತವಾಗಿದ್ದಾರೆ. ಶೇ.50ರಷ್ಟು ಹಿಂದೂ ಶೇ.50ರಷ್ಟು ಮುಸ್ಲಿಂ ಇವರು ಕಡೆ ಹಿಂದೂಗಳು ಸುರಕ್ಷಿತರಾಗಿದ್ದಾರಾ ಎಂಬ ಸತ್ಯ ತಿಳಿಯದೇ ಕಾಂಗ್ರೆಸ್ ಸೋಗಲಾಡಿ ರಾಜಕಾರಣ ಮಾಡಬಹುದು ನಾವು ಅಂತಹ ರಾಜಕಾರಣ ಮಾಡುವುದಿಲ್ಲ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!