April 29, 2024

MALNAD TV

HEART OF COFFEE CITY

ಕಡೂರಿನ ವೈ ಮಲ್ಲಾಪುರದಲ್ಲಿ ಚಿರತೆ ಸೆರೆ

1 min read

 

ಕಡೂರು: ತಾಲೂಕಿನ ವೈ ಮಲ್ಲಾಪುರ ಪಂಚಾಯಿತಿಯ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಭಯ ಉಂಟು ಮಾಡಿದ್ದ ಸುಮಾರು ಎಂಟು ವರ್ಷದ ಚಿರತೆ ಬೋನಿಗೆ ಬಿದ್ದಿರುವ ಘಟನೆ ನಡೆದಿದೆ.
ಸುಮಾರು 15 ದಿನಗಳಿಂದ ಗ್ರಾಮಸ್ಥರಿಗೆ ಸಮಸ್ಯೆ ಕೊಡುತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಬಂದ ದೂರನ್ನು ಆಧರಿಸಿ ಮೂರು ದಿನಗಳ ಹಿಂದೆ ಅರಣ್ಯಾಧಿಕಾರಿಗಳು ವೈ. ಮಲ್ಲಾಪುರ ಕೆರೆಯಂಗಳದಲ್ಲಿ ಬೋನ್ ಇಟ್ಟಿದ್ದು ಭಾನುವಾರ ಬೆಳಿಗ್ಗೆ ಸುಮಾರು 12 ಗಂಟೆಗೆ ಬೋನಿಗೆ ಬಿದ್ದಿದೆ.

ನಂತರ ಸ್ಥಳಕ್ಕೆ ಭೇಟಿನೀಡಿದ ತಾಲೂಕು ಅರಣ್ಯಾಧಿಕಾರಿ ತನೊಜ್ ಕುಮಾರ್ ಅವರ ತಂಡ ಬೋನಿನಲ್ಲಿರುವ ಚಿರತೆಯನ್ನು ಚಿಕ್ಕಮಗಳೂರು ಅರಣ್ಯಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ.ಅಲ್ಲಿಂದ ಭದ್ರಾ ಅಭಯಾರಣ್ಯಕ್ಕೆ ಕಳುಹಿಸುವುದಾಗಿ ಅರಣ್ಯಾಧಿಕಾರಿ ತನುಜ್ ಕುಮಾರ್ ಮಾಹಿತಿ ನೀಡಿದರು. ಕಾರ್ಯಾಚರಣೆಯಲ್ಲಿ ಯಗಟಿ ಡಿಆರ್ ಎಫ್ ಅಮೃತ ಮತ್ತು ಸಿಬ್ಬಂದಿಗಳಾದ ದೇವರಾಜ್, ಸಂತೋಷ್, ಹರೀಶ್ ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!