ದೋಸೆ ಹಾಕಿ ಸೈ ಎನಿಸಿಕೊಂಡ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ
1 min read
ಚಿಕ್ಕಮಗಳೂರು: ವಿಮಾನದ ಕ್ಯಾಂಟೀನ್ ಬಳಿ ಸಚಿವ ನಾರಾಯಣ ಗೌಡ ಅವರಿಗೆ ಗೂಸಾ ಕೊಟ್ಟು ಚರ್ಚೆಗೆ ಗ್ರಾಸವಾಗಿದ್ದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕಡೂರು ಶಾಸಕ ಬೆಳ್ಳಿಪ್ರಕಾಶ್ ಇದೀಗ ಹೋಟೆಲ್ ನಲ್ಲಿ ದೋಸೆ ಹಾಕಿ ಗಮನ ಸೆಳೆದಿದ್ದಾರೆ.
ಕಡೂರು-ಬೀರೂರು ರಸ್ತೆ ಮಧ್ಯದಲ್ಲಿರುವ ರಸಂ ಹೋಟೆಲ್ ಗೆ ಸೋಮವಾರ ಬೆಳಗ್ಗೆ ಹೋಗಿದ್ದ ಶಾಸಕ ಬೆಳ್ಳಿ ಪ್ರಕಾಶ್ ದೋಸೆ ಹಾಕುವ ಎಕ್ಸ್ ಫರ್ಟ್ ಗಳಿಗೆ ಕಡಿಮೆ ಇಲ್ಲದಂತೆ ಮೂರು ದೋಸೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ನಿಮ್ ಥರಾ ನನಗೆ ದೋಸೆ ಹಾಕೋಕೆ ಬರಲ್ವೇನೋ ಎನ್ನುತ್ತಲೇ ಬಿಸಿಯಾಗಿ ಕಾಯ್ದಿದ್ದ ಕಾವಲಿ ಮೇಲೆ ನೀರು ಚುಮುಕಿಸಿದ ಬೆಳ್ಳಿಪ್ರಕಾಶ್ ಪಳಗಿದ ವ್ಯಕ್ತಿಯಂತೆ ಮೂರು ದೋಸೆಗಳನ್ನು ಹಾಕಿ ಸೈ ಎನಿಸಿಕೊಂಡಿದ್ದಾರೆ.
ಓಹ್ ಇಷ್ಟು ಚಂದ ದೋಸೆ ಹಾಕ್ತೀರಲ್ಲ ಸರ್ ಅಂತ ಹೋಟೆಲ್ ಮಾಲೀಕರು, ಸಿಬ್ಬಂದಿ ಶಾಸಕರ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g