ಕಾರ್ಮಿಕರೇ ಮಾಲೀಕರಾಗಿದ್ದ ಸಾರಿಗೆ ಸಂಸ್ಥೆಗೆ ಬೀಗ, ಭ್ರಷ್ಟಾಚಾರದ ಮೊದಲ ವಿಕೆಟ್ ಪತನ…?
1 min read
ಚಿಕ್ಕಮಗಳೂರು : ಕಾರ್ಮಿಕರೇ ಕಟ್ಟಿ ಬೆಳೆಸಿದ್ದ ಜಿಲ್ಲೆಯ ಮಲೆನಾಡು ಭಾಗದ ಜೀವನಾಡಿಯಾಗಿದ್ದ ಸಹಕಾರಿ ಸಾರಿಗೆ ಸಂಸ್ಥೆಗೆ ನಷ್ಟದ ನೆಪವೊಡ್ಡಿ ಎರಡು ವರ್ಷದ ಹಿಂದೆ ಬೀಗ ಹಾಕಲಾಗಿತ್ತು. ಬಳಿಕ ಭವಿಷ್ಯ ನಿಧಿ ಇಲಾಖೆ ಕಾರ್ಮಿಕರ ಪಿ.ಎಫ್. ಹಣವನ್ನ ಕಟ್ಟಿಲ್ಲ ಎಂದು ಸಹಕಾರ ಸಾರಿಗೆ ಸಂಸ್ಥೆಯ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಹಕಾರ ಸಾರಿಗೆ ಸಂಸ್ಥೆಯ ಎಂ.ಡಿ. ಗಾಡ್ವಿನ್ ಜಯಪ್ರಕಾಶ್ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಳ್ಳದ ಹಿನ್ನೆಲೆ ಕೊಪ್ಪ ಪೊಲೀಸರು ಸಂಸ್ಥೆಯ ಎಂ.ಡಿ. ಗಾಡ್ವಿನ್ ಜಯಪ್ರಕಾಶ್ ಅವರನ್ನ ಬಂಧಿಸಿ ನ್ಯಾಯಾಲಾಯದ ಮುಂದೆ ಹಾಜರುಪಡಿಸಿದ್ದರು. ಇದೀಗ ಕೋರ್ಟ್ ಗಾಡ್ವಿನ್ ಜಯಪ್ರಕಾಶ್ ಅವರಿಗೆ ನ್ಯಾಯಾಂಗ ಬಂಧಿನ ವಿಧಿಸಿದೆ. ಇದರಿಂದ ಸಹಕಾರ ಸಾರಿಗೆ ಸಂಸ್ಥೆಯ ಭ್ರಷ್ಟಕೂಟದ ಮೊದಲ ವಿಕೆಟ್ ಪತನವಾಗಿದೆ ಎಂದು ಸಂಸ್ಥೆಯ ಕಾರ್ಮಿಕರು ಅಭಿಪ್ರಾಯಪಟ್ಟಿದ್ದಾರೆ.
ಹತ್ತಾರು ವರ್ಷಗಳಿಂದ ಸಾವಿರಾರು ಜನರ ಬದುಕಿನ ಆಧಾರ ಸ್ತಂಭವಾಗಿ, ಲಕ್ಷಾಂತರ ಜನರ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆಗೆ ಬೀಗ ಬಿದ್ದಿದ್ದರಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಪೆÇಲೀಸರು ಎಂ.ಡಿ. ಗಾಡ್ವಿನ್ ಜಯಪ್ರಕಾಶ್ ಅವರನ್ನ ಸೂಕ್ತ ರೀತಿಯಲ್ಲಿ ತನಿಖೆಗೆ ಒಳಪಡಿಸಿದರೆ ನೊಂದ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ. ಮಲೆನಾಡಲ್ಲಿದ್ದ ಶಂಕರ್ ಟ್ರಾನ್ಸ್ಪೋರ್ಟ್ಗೆ ಬೀಗ ಬಿದ್ದ ಬಳಿಕ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೇ ಬಸ್ಗಳನ್ನ ಖರೀದಿಸಿದ್ದರು. ಕೇವಲ ಐದು ಬಸ್ನಿಂದ ಆರಂಭವಾದ ಸಹಕಾರ ಸಾರಿಗೆ ಸಂಸ್ಥೆ 75 ಬಸ್ಗಳಾಗಿದ್ದವು. ಈ ಸಂಸ್ಥೆಗೆ ಮಾಲೀಕರಿಗೆ ಇರಲಿಲ್ಲ.
ಕಾರ್ಮಿಕರೇ ಮಾಲೀಕರಾಗಿದ್ದರು. ಈ ಸಂಸ್ಥೆ ಮಲೆನಾಡಿಗರ ಜೀವನಾಡಿಯಾಗಿತ್ತು. ಮಲೆನಾಡ ಕುಗ್ರಾಮಗಳಲ್ಲೂ ಸಾರಿಗೆ ಸಂಸ್ಥೆಯ ಅಚ್ಚು ಬಿದ್ದಿತ್ತು. ಮಕ್ಕಳಿಗೆ, ಹಿರಿಯ ನಾಗರೀಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ವಿದ್ಯಾರ್ಥಿಗಳಿಗೆ ಟಿಕೆಟ್ನಲ್ಲಿ ರಿಯಾಯಿತಿ ಇತ್ತು. ಮಲೆನಾಡಲ್ಲಿ ಸರ್ಕಾರಿ ಬಸ್ ಓಡಾಡದ ಜಾಗದಲ್ಲಿ ಸಾರಿಗೆ ಸಂಸ್ಥೆಯೇ ಜೀವಾಳವಾಗಿತ್ತು. ಆದರೆ, ಎರಡು ವರ್ಷದ ಹಿಂದೆ ಸಂಸ್ಥೆಗೆ ಬೀಗ ಬಿದ್ದ ಮೇಲೆ ಮಲೆನಾಡಿಗರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಕಾರ್ಮಿಕರು ಬೀದಿಗೆ ಬಿದ್ದಿದ್ದರು. ನಷ್ಟವನ್ನ ಸರಿದೂಗಿಸಲು ಕಾರ್ಮಿಕರು ಸರ್ಕಾರದ ಕದ ಬಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ, ಸಂಸ್ಥೆಯ ಎಂ.ಡಿ. ನ್ಯಾಯಾಂಗ ಬಂಧನದ ವಶದಲ್ಲಿದ್ದು ಸಂಸ್ಥೆಯ ನಷ್ಟಕ್ಕೆ ಕಾರಣ ಏನೆಂದು ತಿಳಿದುಕೊಳ್ಳುವ ಕಾತುರ ಕಾರ್ಮಿಕರಲ್ಲಿದೆ. ಪೊಲೀಸರ ಸೂಕ್ತ ತನಿಖೆಯಿಂದ ಸಂಸ್ಥೆಯ ಇಂದಿನ ಸ್ಥಿತಿಗೆ ಕಾರಣ ಏನೆಂಬುದು ಹೊರಬರಬೇಕಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g