ದಶಕದಿಚೆಗೆ ಉರುಸ್ ನಮ್ಮ ಪದ್ಧತಿಯಂತೆ ನಡೆಯುತ್ತಿಲ್ಲ
1 min read
ಚಿಕ್ಕಮಗಳೂರು: ಕಳೆದ ಒಂದು ದಶಕದಿಂದ ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯುತ್ತಿರುವ ಉರುಸ್ ಕಾರ್ಯಕ್ರಮ ನಮ್ಮ ಪದ್ಧತಿಯಂತೆ ನಡೆಯುತ್ತಿಲ್ಲ. ಸಾಕಷ್ಟು ಅಡೆತಡೆಗಳನ್ನು ಹಾಕಲಾಗುತ್ತಿದೆ. ಜಿಲ್ಲಾಡಳಿತ ನಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿಲ್ಲ. ಈ ಬಾರಿ ನಮ್ಮ ಆಚರಣೆಗೆ ಯಾವುದೇ ಅಡೆತಡೆಗಳನ್ನು ಮಾಡದಂತೆ ಮುಸ್ಲೀಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಮಾರ್ಚ್ 18 ರಿಂದ 20 ರ ವರೆಗೆ ದತ್ತಪೀಠದಲ್ಲಿ ಉರುಸ್ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಮುಸ್ಲೀಂ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಗುರುವಾರ ಸಂಜೆ ಪೂರ್ವ ಸಿದ್ಧತಾ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು. ಈ ವೇಳೆ ಮುಸ್ಲೀಂ ಮುಖಂಡ ಮುಸ್ಲೀಂ ಮುಖಂಡರು ನಮ್ಮ ಪದ್ಧತಿಗಳು ಸರಿಯಾಗಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ರಸ್ತೆಯ ಇಕ್ಕೆಲಗಳಲ್ಲಿ ಬಾಬಾ ಬುಡನ್ ಗಿರಿ ಎಂದು ನಮೂದಿಸಿದ ಬೋರ್ಡ್ಗಳನ್ನು ಹಾಕಲಾಗಿತ್ತು. ಆದರೆ ರಸ್ತೆ ಅಗಲೀಕರಣದ ನೆಪದಲ್ಲಿ ಅವುಗಳನ್ನು ತೆರವು ಮಾಡಿದ್ದು ಮತ್ತೆ ಹಾಕಿಲ್ಲ. ಈಗಲಾದ್ರು ಬೋರ್ಡ್ಗಳನ್ನು ಹಾಕುವಂತೆ ಒತ್ತಾಯಿಸಿದರು. ಸಿರಾಜ್ ಮಾತನಾಡಿ ಬಾಬಾಬುಡನ್ ದರ್ಗಾದ ಬಳಿ ಇರುವ ಬೋರ್ಡ್ ಹಳೆಯದಾಗಿದ್ದು ಹೊಸ ಬೋರ್ಡ್ ಹಾಕುವಂತೆ ಮನವಿ ಮಾಡಿದರು.
* ಒಂದು ದಿನ ಮೊದಲು ಹುಣ್ಣಿಮೆ ಆಚರಣೆಗೆ ಒತ್ತಾಯ
ಉರುಸ್ ದಿನದಂದು ಹುಣ್ಣಿಮ ಪೂಜೆಯ ಕಾರ್ಯಕ್ರಮವನ್ನು ಸಹ ನಡೆಸಲಾಗುತ್ತಿದ್ದು, ಸೌಹಾರ್ಧಯುತವಾಗಿ ಕಾರ್ಯಕ್ರವನ್ನು ನಡೆಸುವ ಉದ್ದೇಶದಿಂದ ಹುಣ್ಣಿಮೆ ಪೂಜೆಯನ್ನು ಒಂದು ದಿನ ಮೊದಲು ನಡೆಸುವಂತೆ ಮುಸ್ಲೀಂ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಹುಣ್ಣಿಯ ದಿನವೇ 100ಕ್ಕೂ ಹೆಚ್ಚು ಜನ ಫಕೀರರು ದತ್ತಪೀಠಕ್ಕೆ ಆಗಮಿಸುತ್ತಾರೆ ಅಂದೆ ಹುಣ್ಣಿಮೆಯ ಕಾರ್ಯಕ್ರಮಗಳು ನಡೆಯುವುದರಿಂದ ನಮ್ಮ ಸಂಪ್ರದಾಯಗಳಿಗೆ ತೊಂದರೆಯಾಗುತ್ತದೆ. ಕಳೆದ ಬಾರಿ ಆ ರೀತಿಯ ಘಟನೆಯಾಗಿದ್ದು ಒಂದು ದಿನ ಮೊದಲು ಹುಣ್ಣಿಮೆ ಪೂಜೆ ನಡೆಸುವಂತೆ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದರು.
* 15 ಸಾವಿರ ಜನರ ನಿರೀಕ್ಷೆ
ಮೂರು ದಿನಗಳ ಕಾಲ ನಡೆಯುವ ಉರುಸ್ನಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಭೆಯಲ್ಲಿ ಮುಸ್ಲೀಂ ಮುಖಂಡರುಗಳು ತಿಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಇತ್ತೀಚ್ಚೆಗೆ ನಮ್ಮ ಆಚರಣೆಗೆ ಸಾಕಷ್ಟು ತೊಂದರೆ ಉಂಟಾಗುತ್ತಿರುವ ಕಾರಣ ಜನರನ್ನು ಸೇರಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ರು
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಹೆಚ್ ಅಕ್ಷಯ್, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ಮುಸ್ಲೀಂ ಮುಖಂಡರು ಇದ್ದರು.
ಉರುಸ್ ವೇಳೆ ಇನಾಂ ದತ್ತಾತ್ರೇಯ ಪೀಠದಲ್ಲಿ ಸೂಕ್ತ ಮೂಲಭೂತ ಸೌಲಭ್ಯ ಹಾಗೂ ಸೂಕ್ತ ಪೊಲೀಸ್ ಬಂದೂಬಸ್ತ್ ಒದಗಿಸುವಂತೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಸೂಚನೆ ನೀಡಿದರು. ರಸ್ತೆ ಸಂಪರ್ಕ, ವಿದ್ಯುತ್, ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ಆರೋಗ್ಯ ಸೇವೆ ಭಕ್ತಾದಿಗಳಿಗೆ ಪ್ರಸಾದ, ಭಕ್ತರ ವಾಸ್ತವ್ಯಕ್ಕೆ 3 ದಿನಗಳ ಅವಧಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಸೂಚನೆ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g