ಜಮೀನು ವಿಚಾರಕ್ಕೆ ಮಚ್ಚು, ಲಾಂಗ್’ನಿಂದ ಹೊಡೆದಾಟ: ಐವರಿಗೆ ಗಾಯ
1 min readಚಿಕ್ಕಮಗಳೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಪರಸ್ಪರ ಎರಡು ಕುಟುಂಬಗಳು ಮಚ್ಚು, ಲಾಂಗ್ ನಿಂದ ಹೊಡೆದಾಡಿಕೊಂಡಿರುವ ಘಟನೆ ಸಖರಾಯಪಟ್ಟಣದ ಚಟ್ನಪಾಳ್ಯದಲ್ಲಿ ನಡೆದಿದೆ. ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು ದೂರು ಪ್ರತಿದೂರು ದಾಖಲಾಗಿದೆ.
ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ, ಕೈಯಲ್ಲಿ ಲಾಂಗ್ ಇಟ್ಕೊಂಡು ಬರ್ರೋ… ಬನ್ನಿ ಅಂತ ಹೊಡೆದಾಟಕ್ಕೆ ಎರಡೂ ಕುಟುಂಬದವರು ಇಳಿದಿದ್ದು ಎರಡು ಕುಟುಂಬಗಳ ಸಹೋದರರು ಕುಡುಗೋಲು, ಲಾಂಗ್ ಹಿಡಿದು ಗಲಾಟೆ ಮಾಡಿಕೊಂಡಿದ್ದಾರೆ, ಕಡೂರು ತಾಲೂಕಿನ ಚಟ್ಟನಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಮೀನು ಸ್ವಾಧೀನದಲ್ಲಿ ಇರೋರೆ ಬೇರೆ, ಪಹಣಿಯಲ್ಲಿ ಹೆಸರು ಇರೋರೆ ಬೇರೆಯಾಗಿರುವುದು ಕಾರಣವಾಗಿದೆ, ಜಮೀನಿನ ಸ್ವಾಧೀನದಲ್ಲಿ ಅಣ್ಣ ಇದ್ದರೆ, ತಮ್ಮನ ಹೆಸರಲ್ಲಿ ಪಹಣಿ ಇದೆ. ಅಡಿಕೆ ಕಟಾವು ಮಾಡುವಾಗ ಪ್ರತಿ ಬಾರಿ ಈ ರೀತಿ ಗಲಾಟೆ ನಡೆಯುತ್ತಿದ್ದು, ಇಬ್ಬರಿಂದಲೂ ಪೊಲೀಸರಿಗೆ ದೂರುಗಳು ನೀಡಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಪ್ರಕರಣ ನಡೆದಿದ್ದು ತಡವಾಗಿ ಇದು ಬೆಳಕಿಗೆ ಬಂದಿದೆ. ಸಖರಾಯಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g