ಬರಪೀಡಿತ ತಾಲೂಕು ಘೋಷಣೆಯಾಗದಿರಲು ಶಾಸಕಕರೇ ನೇರ ಕಾರಣ..!
1 min readಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡದಿರಲು ನೇರವಾಗಿ ಶಾಸಕ ಎಚ್.ಡಿ ತಮ್ಮಯ್ಯ ಹಾಗೂ ಅಧಿಕಾರಿಗಳೇ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಚಿಕ್ಕಮಗಳೂರು ತಾಲೂಕನ್ನ ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಡಲು ನೇರ ಕಾರಣ ಶಾಸಕ ತಮ್ಮಯ್ಯ ಹಾಗೂ ತಹಶಿಲ್ದಾರ್ ಆಗಿದ್ದು , ರೈತರ ಮೇಲೆ ಇವರ ನಿರ್ಲಕ್ಷ್ಯ ಧೋರಣೆ ಖಂಡಿಸಿ ಇದೇ ಡಿಸೆಂಬರ್ 13 ರಂದು ಚಿಕ್ಕಮಗಳೂರು ತಾಲ್ಲೂಕು ಕಚೇರಿ ಹೊರಗೆ ಧರಣಿ ನಡೆಸಲಾಗುವುದು ಎಂದರು. ಜಿಲ್ಲಾಡಳಿತ ಪುಸ್ತಕ ನೋಡಿ ಅಡುಗೆ ಮಾಡಿದಂತೆ ಅಧಿಕಾರಿಗಳು ಬರಗಾಲ ಘೋಷಣೆ ಮಾನದಂಡ ಅನುಸರಿಸಿದ್ದು ಇದೇ ಅಧಿಕಾರಿಗಳು ನಮ್ಮ ಜೊತೆ ಬರಲಿ ಬರಗಾಲ ಎಲ್ಲಿದೆ ಎಂದು ತೋರಿಸುತ್ತೇವೆ ಎಂದು ರೈತ ಮುಖಂಡ ಕೃಷ್ಣೇಗೌಡ ಸವಾಲು ಹಾಕಿದ್ದಾರೆ. ಅಧಿಕಾರಿಗಳು ಮೈಮರೆತು ಕುಳಿತಿದ್ದಾರೆ ಚಿಕ್ಕಮಗಳೂರು ತಾಲೂಕಿನ ಬಗ್ಗೆ ಮಲತಾಯಿ ಧೋರಣೆ ರಾಜ್ಯ ಸರ್ಕಾರ ಅನುಸರಿಸುತ್ತಿದ್ದು ಕೂಡಲೇ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g