ವೇದದ ತಾಕತ್ತು ಏನೆಂದು ಶಿವ ತೋರಿಸಿದ್ದಾನೆ ಅವಧೂತ ವಿನಯ್ ಗುರೂಜಿ
1 min readಡಾಕ್ಟರ್, ಯಮನಿಗಿಂತ ಶಿವ ದೊಡ್ಡವನು, ಕಾರಜೋಳರ ಮಗನ ವಿಚಾರದಲ್ಲಿ ಇದು ನಿಜವಾಗಿದೆ ಎಂದು ಮೃತ್ಯಂಜಯ ಯಾಗದ ಪೂರ್ಣಾಹುತಿ ಬಳಿಕ ವಿನಯ್ ಗುರೂಜಿ ಹೇಳಿದರು.
ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದಲ್ಲಿ ಯಾಗದ ಪೂರ್ಣಾವುತಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವಧೂತ ವಿನಯ್ ಗುರೂಜಿ, 116 ಮೂಲಿಕೆಗಳಿಂದ ಮೃತ್ಯಂಜಯ ಯಾಗ ನಡೆದಿದೆ, ವೈದ್ಯರು ಬದುಕೋದೆ ಇಲ್ಲ ಎಂದು ಹೇಳಿದ್ದರು, ಆಗ ಡಿಸಿಎಂ ಕಾರಜೋಳರ ಜೊತೆ ಮಾತನಾಡಿದ್ದೆ, 2 ತಿಂಗಳು ಬಿಟ್ಟು ನಿಮ್ಮ ಮಗನ ಜೊತೆ ದೋಸೆ ತಿನ್ನುತ್ತೇನೆ ಎಂದಿದ್ದೆ, ಈ ರೀತಿ ಹೇಳಿದಾಗ ಎಲ್ಲಾ ಡಾಕ್ಟರ್ ಶಾಕ್ ಆಗಿದ್ರು, ಆಗ ಆಶ್ರಮದಲ್ಲಿ ದತ್ತಾತ್ರೇಯನಿಗೆ ಪ್ರಾರ್ಥನೆ ಮಾಡಿದ್ದೇವು, 16 ದಿನ, 48 ಜನ ನೀರಿನಲ್ಲಿ ಕೂತು ಜಪ ಮಾಡಿದ್ದರು, ವೇದದ ತಾಕತ್ತು ಏನೆಂದು ಭಗವಂತ ತೋರಿಸಿದ್ದಾನೆ
ಮೆಡಿಕಲ್ ಸೈನ್ಸ್, ಪ್ರಪಂಚಕ್ಕೂ ಭಗವಂತ ತೋರಿಸಿದ್ದಾನೆ, ಇವತ್ತು ಸಿಎಂ ಯಡಿಯೂರಪ್ಪನವರ ಹುಟ್ಟುಹಬ್ಬ, ಸಿಎಂಗೆ ಆರೋಗ್ಯ, ಆತ್ಮಬಲ, ಸರ್ಕಾರ ಮತ್ತಷ್ಟು ಚೆನ್ನಾಗಿ ನೆಡೆಸುವಂತೆ ಅನುಗ್ರಹಿಸಲಿ ಎಂದು ಅವರ ಪರವಾಗಿ ಡಿಸಿಎಂ, ನಾನು ಪೂರ್ಣಾಹುತಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g