ಸಿ.ಟಿ.ರವಿ ವಿರುದ್ಧ ತಾಳಿಕಟ್ಟೆ ಲೋಕೇಶ್ ಕಿಡಿ ಮಾತನಾಡುವ ಮುನ್ನ ರವಿಗೆ ನಾಲಿಗೆ ಮೇಲೆ ಹಿಡಿತವಿರಲಿ
1 min readಸಿ.ಟಿ.ರವಿ ಅಲ್ಲ, ಲೂಟಿ ರವಿ. ಸಿ.ಟಿ.ರವಿ ಅವಕಾಶವಾದ ರಾಜಕಾರಣಿ. ಸಿ.ಟಿ.ರವಿ ಬುಕಾಳಿ ಹಾಗೂ ಹಿಟ್ ಅಂಡ್ ರನ್ ರವಿ ಎಂದು ಕಾಂಗ್ರೆಸ್ ಮುಖಂಡ ತಾಳಿಕಟ್ಟೆ ಲೋಕೇಶ್ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಸಿ.ಟಿ.ರವಿಯವರು, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಸಿ.ಟಿ.ರವಿ ಚುನಾಯಿತ ಪ್ರತಿನಿಧಿಯಾಗುವ ಮುನ್ನ ಸಂಘ ಸಂಸ್ಥೆಗಳ ಹೆಸರಿನಲ್ಲಿ ಅಫ್ತ ವಸೂಲಿ ಮಾಡುತ್ತ ಪೆÇೀಲಿ ರವಿಯಾಗಿದ್ದವರು ಇಂದು ನೂರಾರು ಕೋಟಿಯ ಒಡೆಯ ಆಗಿರುವುದು ಲೂಟಿ ಇಂದ ಮಾತ್ರ ಸಾಧ್ಯ ಎಂದಿದ್ದಾರೆ. ಕೇವಲ ಮಾತಿನಲ್ಲಿ ಅಭಿವೃದ್ಧಿ ತೋರಿಸುತ್ತಾ ನಾಟಕವಾಡುತ್ತಿದ್ದಾರೆ. ಒಂದು ದೇಶ-ಒಂದು ಭಾಷೆ ಹೆಸರಿನಲ್ಲಿ ಹಿಂದಿ ಭಾಷೆಗೆ ಮಹತ್ವ ಕೊಡುವ ಮೂಲಕ ಕನ್ನಡ ಭಾಷೆಯನ್ನು ಕಡೆಗಣಿಸಿ ಸಿ.ಟಿ.ರವಿ ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡುವುದನ್ನ ಬಿಡಬೇಕು. ಅವರ ಈ ರೀತಿ ಹೇಳಿಕೆ ಪುಂಡತನ ಮತ್ತು ಸಣ್ಣತನ ತೋರುತ್ತದೆ. ಇನ್ನು ಮುಂದಾದರು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g