ಹಾಡುಹಗಲೇ ಜಳಪಿಳಿಸಿದ ಚಾಕು : ಯುವಕನ ಮೇಲೆ ಮಾರಣಾಂತಿಕ ಹಲ್ಲೆ
1 min readಚಿಕ್ಕಮಗಳೂರು : ಹಳೆಯ ವೈಷಮ್ಯದಿಂದ ಕ್ಷುಲಕ ಕಾರಣಕ್ಕಾಗಿ ದುಷ್ಕರ್ಮಿಗಳು ಕ್ಯಾತೆ ತೆಗೆದು ಹಾಡುಹಗಲೆ ಚಾಕು, ಲಾಂಗುಗಳು ಜಳಪಳಿಸಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಮಿಲನ್ ಚಿತ್ರಮಂದಿರ ಬಳಿ ನಡೆದಿದೆ.
ಕನ್ನಡ ಚಿತ್ರ ನಟ ಸುದೀಪ್ ರವರ ಬಹು ನಿರೀಕ್ಷಿತ ಚಿತ್ರ ವಿಕ್ರಮ್ ರೋಣಾ ಚಲನ ಚಿತ್ರವನ್ನು ನಗರದ ಮಿಲನ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುತ್ತಿತ್ತು. ಚಿತ್ರ ವೀಕ್ಷಣೆಗೆ ಬಂದ ಗೂಳಿ ಭರತ್ ಹಾಗೂ ಅವನ ಸಹಚರರ ಮೇಲೆ ಹಳೆ ವೈಷಮ್ಯದಿಂದ ಸಮಯ ಕಾದು ದುಷ್ಕರ್ಮಿಗಳು ಚಾಕಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಚಿತ್ರಮಂದಿರದ ಮುಂಭಾಗದ ಗೇಟಿನ ಹೊರಗೆ ಎಳೆದೊಯ್ದು ಹಾಡು ಹಗಲೇ ನಡು ರಸ್ತೆಯಲ್ಲೇ ದೈಹಿಕವಾಗಿಯು ತಳಿಸಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾದ ಗೂಳಿ ಭರತ್ ನನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದಿದ್ದು, ಭರತನ ತುರ್ತು ಸ್ಥಿತಿ ಮನಗಂಡ ವೈದ್ಯರು ಹಾಸನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶಾಂತಿಯಿಂದ ಇದ್ದ ನಗರದಲ್ಲಿ ಹಾಡು ಹಗಲೇ ಚಾಕು, ಚೂರಿ, ಲಾಂಗುಗಳು ಜಳಪಳಿಸುತ್ತಿರುವುದು ನಾಗರೀಕರನ್ನು ಬೆಚ್ಚಿಬೀಳಿಸಿದೆ. ಸಮಾಜಘಾತುಕರನ್ನು ಎಡೆಮುರಿ ಕಟ್ಟಬೇಕಾದ ಪೊಲೀಸರ ಕರ್ತವ್ಯದ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g