May 1, 2024

MALNAD TV

HEART OF COFFEE CITY

ಯಾವ ಆಧಾರದಲ್ಲಿ ಪೌರಾಯುಕ್ತರಾಗಿ ನೇಮಕವಾಗಿದ್ದಾರೆ? – ಎ.ಸಿ ಕುಮಾರ್

1 min read

ಚಿಕ್ಕಮಗಳೂರು : ನಗರಸಭೆ ಪೌರಾಯುಕ್ತರು ಕಾನೂನು ಬಾಹಿರವಾಗಿ ನೇಮಕಾತಿಗೊಂಡಿದ್ದಾರೆ ಎಂದು ನಗರಸಭ ಸದಸ್ಯರಾದ ಎ.ಸಿ. ಕುಮಾರ್ ಗೌಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರಭೆ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ.ಸಿ. ಬಸವರಾಜ್ ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುವ ಸಮಯದಲ್ಲಿ ಕೆಮ್ಮಣ್ಣುಗುಂಡಿ ಪ್ರದೇಶ ಅಧಿಸೂಚಿ ಸಮಿತಿಯಲ್ಲಿ ಅಟೆಂಡರ್ ಅಗಿ ಹೇಗೆ ಕೆಲಸ ನಿರ್ವಹಿಸಲು ಸಾಧ್ಯ, ಇವರ ವಿದ್ಯಾಭ್ಯಾಸದ ಹಾಗೂ ನೌಕರಿಗೆ ಸಂಬಂಧಿಸಿದ ಸಂಪೂರ್ಣ ದಾಖಲಾತಿಗಳು ನಮ್ಮಲ್ಲಿ ಲಭ್ಯವಿದೆ. ಕೆಮ್ಮಣ್ಣುಗುಂಡಿ ಪ್ರದೇಶ ಅಧಿಸೂಚಿ ಸಮಿತಿಯಲ್ಲಿ ಅಟೆಂಡರ್ ಆಗಿ ಬಿ.ಸಿ. ಬಸವರಾಜ್ ನೇಮಕಾತಿ ಆಗಿರುವುದೆ ಅಕ್ರಮವಾಗಿರುವಾಗ, ನೇರ ನೇಮಕಾತಿಯಲ್ಲಿ ಪೌರಾಯುಕ್ತರಾಗಿರುವುದು ಸಿಂಧುತ್ವ ಆಗುವುದಿಲ್ಲ. ಈ ಬಗ್ಗೆ ಈ ಹಿಂದೆ ಹಲವು ತನಿಖೆಗಳಾದರೂ ಸುಳ್ಳು ವರದಿ ನೀಡುವ ಮೂಲಕ ತನಿಖೆಯ ಹಾದಿ ತಪ್ಪಿಸಿದ್ದಾರೆ. ಕೂಡಲೇ ಸ್ಥಳೀಯ ಶಾಸಕರು ಸರ್ಕಾರದ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ಗೋಪಿ, ಜೆಡಿಎಸ್ ಮುಖಂಡರಾದ ಮೂರ್ತಿ, ಮಂಜುನಾಥ್, ಇರ್ಷಾದ್ ಅಹಮ್ಮದ್ ಉಪಸ್ಥಿತರಿದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!