May 8, 2024

MALNAD TV

HEART OF COFFEE CITY

Kalasa taluk center for Purushartha, local question ಧೂಳು, ಗುಂಡಿಮಯ ರಸ್ತೆ, ಯಾವ ಪುರುಷಾರ್ಥಕ್ಕೆ ಕಳಸ ತಾಲೂಕು ಕೇಂದ್ರ, ಸ್ಥಳಿಯರ ಪ್ರಶ್ನೆ

1 min read

ಚಿಕ್ಕಮಗಳೂರು : ರಸ್ತೆ ಅವ್ಯವಸ್ಥೆ ವಿರುದ್ಧ ಜನ ಚಿತ್ರ-ವಿಚಿತ್ರವಾಗಿ ವ್ಯಂಗ್ಯವಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರೋ ಘಟನೆ ಜಿಲ್ಲೆಯ ಕಳಸ ಪಟ್ಟಣದಲ್ಲಿ ನಡೆದಿದೆ. ಕಳಸ ಪಟ್ಟಣದಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗುವ ಮಾರ್ಗ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಗುಂಡಿ ಇದ್ಯೋ ಅಥವ ಗುಂಡಿಯಲ್ಲಿ ಇದ್ಯೋ ಗೊತ್ತಿಲ್ಲದಂತಾಗಿದೆ. ಈ ಮಧ್ಯೆ ಸಿಕ್ಕಾಪಟ್ಟೆ ದೂಳು. ಹಾಗಾಗಿ, ಕಳಸದ ಜನ ಚಿತ್ರ-ವಿಚಿತ್ರವಾಗಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ರಸ್ತೆಯಲ್ಲಿ ವಾಹನಗಳಲ್ಲಿ ಸಂಚರಿಸದಷ್ಟು ಹಾಳಾಗಿದೆ. ಅಡಿಗಟ್ಟಲೇ ಗುಂಡಿ ಬಿದ್ದಿದ್ದು ವಾಹನಗಳನ್ನ ಚಾಲನೆ ಮಾಡುವುದೇ ದುಸ್ತರವಾಗಿದೆ. ಹಾಗಾಗಿ, ಅಧಿಕಾರಿಗಳು-ಜನಪ್ರತಿನಿಧಿಗಳ ಗಮನಕ್ಕೆ ತಂದು ರೋಸಿ ಹೋದ ಜನ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಈ ಮಾರ್ಗದಲ್ಲಿ ಶಾಲಾ-ಕಾಳೇಜು ಕೂಡ ಇದೆ. ವಿದ್ಯಾರ್ಥಿಗಳು-ಮಕ್ಕಳು ಇದೇ ಮಾರ್ಗದಲ್ಲಿ ಓಡಾಡಬೇಕು. ನಿತ್ಯ ಧೂಳಿನಿಂದ ಮಕ್ಕಳು, ದೊಡ್ಡವರು ಹೈರಾಣಾಗಿದ್ದಾರೆ.

ಹಾಗಾಗಿ, ಜನ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಈ ಹಿಂದೆ ಕೂಡ ಇದೇ ಕಳಸ ಪಟ್ಟಣದಲ್ಲಿ ರಸ್ತೆಗಳು ಗುಂಡಿ ಬಿದ್ದಾಗ ಜನ ಆ ಗುಂಡಿಗಳಲ್ಲಿ ಒಲಂಪಿಕ್ಸ್‍ನಲ್ಲಿ ಈಜು ಸ್ಪರ್ಧೆ ನಡೆಸುವಂತೆ, ಸನ್ನಿ ಲಿಯೋನ್ ಇರುವಂತೆ, ಬಾಲಿವುಡ್ ನಟಿಯರು ಈ ಗುಂಡಿ ಬಳಿ ಬಂದು ನಿಂತಿರುವಂತೆ ಎಡಿಟ್ ಮಾಡಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದರು. ಇದೀಗ, ಈ ಮತ್ತಷ್ಟು ವಿಭಿನ್ನವಾಗಿ ಅನ್‍ಲೈನ್‍ನಲ್ಲಿ ಎಡಿಟ್ ಮಾಡಿ ಮತ್ತೊಮ್ಮೆ ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ. ಕಳಸ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ಈ ಸುಖಕ್ಕೆ ತಾಲೂಕು ಕೇಂದ್ರ ಯಾವ ಪುರುಷಾರ್ಥಕ್ಕೆ ಎಂದು ಜನ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಕಪ್ಪಾಗಿರುವ ಫಾರಿನ್ ವ್ಯಕ್ತಿ ಫುಲ್ ವೈಟ್ ಆಗಿರುವಂತೆ, ಕಳಸದಲ್ಲಿ ಸಂಚಾರ ಮಾಡಿದ ಸೂಪರ್‍ಮ್ಯಾನ್ ಧೂಳಿನಿಂದ ಇನ್ಫೆಕ್ಷನ್ ಆಗಿ ಆಸ್ಪತ್ರೆ ಸೇರಿದಂತೆ, ಗಿಳಿ ಕೂಡ ಕಪ್ಪಾಗಿರುವಂತೆ. ಹೀಗಿ ವಿಭಿನ್ನವಾಗಿ ಎಡಿಟ್ ಮಾಡಿ ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!