May 2, 2024

MALNAD TV

HEART OF COFFEE CITY

ಪ್ರಕೃತಿ ಸೌಂದರ್ಯ ಸವಿಯಲು ಕಾಫಿನಾಡಿಗೆ ಬಂದ ಜಾರ್ಖಂಡ್ ಸಿಎಂ

1 min read

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಸೌಂದರ್ಯವನ್ನ ಸವಿಯಲು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೇನ್ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ಕಾಫಿನಾಡಿಗೆ ಆಗಮಿಸಿರುವ ಜಾರ್ಖಂಡ್ ಸಿಎಂ ಹೇಮಂತ್ ಸೋರೇನ್ ಮುಳ್ಳಯ್ಯಗಿರಿ ಸಮೀಪದ ಖಾಸಗಿ ರೆಸಾರ್ಟ್ ತ್ರಿವಿಕ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ನಾಲ್ಕು ದಿನ ಚಿಕ್ಕಮಗಳೂರಿನಲ್ಲೇ ವಾಸ್ತವ್ಯ ಹೂಡಿರುವ ಹೇಮಂತ್ ಸೂರೇನ್ ತ್ರಿವಿಕ್ ರೆಸಾರ್ಟ್‍ನಲ್ಲಿ 12 ರೂಂಗಳನ್ನ ಬುಕ್ ಮಾಡಿದ್ದು ನಾಲ್ಕು ದಿನವೂ ಚಿಕ್ಕಮಗಳೂರಿನಲ್ಲೇ ತಂಗಲಿದ್ದಾರೆ. ಇಂದು ಮಧ್ಯಾಹ್ನ ಕುಟುಂಬ ಸಮೇತರಾಗಿ ಮುಳ್ಳಯ್ಯಗಿರಿಗೆ ಭೇಟಿ ನೀಡಿದ್ದ ಹೇಮಂತ್ ಸೂರೇನ್ ಸುಮಾರು ಒಂದು ಗಂಟೆಗಳ ಕಾಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಮುಳ್ಳಯ್ಯಗಿರಿ ಸೌಂದರ್ಯವನ್ನ ಸವಿಯಲಿದ್ದಾರೆ. ಶನಿವಾರ ಸಂಜೆ ಜಿಲ್ಲೆಗೆ ಆಗಮಿಸಿರುವ ಸಿಎಂ ಕುಟುಂಬ ನಾಲ್ಕು ದಿನಕ್ಕೂ ತ್ರಿವಿಕ್‍ನಲ್ಲಿ 12 ರೂಂಗಳನ್ನ ಬುಕ್ ಮಾಡಿದ್ದಾರೆ. ಕಾರ್ಯದೊತ್ತಡದಿಂದ ಕೊಂಚ ವಿರಮಿಸಲು ಜಿಲ್ಲೆಗೆ ಆಗಮಿಸಿರೋ ನಾಳೆ ಸಂಜೆ ರೂಂ ಚೆಕ್ ಔಟ್ ಮಾಡಲಿದ್ದು ಜಾಖಂಡ್‍ಗೆ ಹಿಂದಿರುಗಲಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!