ನಕಲಿ ಬಯೋಪರ್ಟಿಲೈಸರ್ಗಳ ಕಂಪನಿಗಳ ಜಾಲಗಳ ಮೇಲೆ ಕ್ರಮಕ್ಕೆ ಒತ್ತಾಯ
1 min readಚಿಕ್ಕಮಗಳೂರು – ನಕಲಿ ಬಯೋಪರ್ಟಿಲೈಸರ್ ಕಂಪನಿಗಳ ಜಾಲಗಳ ಮೇಲೆ ದಾಳಿ ನಡೆಸಲು ಸಂಬAಧ ಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ನಕಲಿ ರಸಗೊಬ್ಬರ ತಯಾರಿಕೆಗೆ ಗಿಬ್ರಾಲಿಕ್ ಆಸಿಡ್ ಬಳಸುತ್ತಿದ್ದು, ಇದರಿಂದ ಇಳುವರಿ ಜಾಸ್ತಿಯಾಗುವುದಿಲ್ಲ. ಆದರೆ ಬಯೋಪರ್ಟಿಲೈಸರ್ ಕಂಪನಿಗಳು ನಕಲಿ ರಸಗೊಬ್ಬರ ತಯಾರಿಸಲು ಇದನ್ನು ಬಳಸುತ್ತಿವೆ. ಇದಕ್ಕೆ ಯಾವುದೇ ಪರವಾನಿಗೆ ಪಡೆದಿರುವುದಿಲ್ಲ. ನಕಲಿ ರಸಗೊಬ್ಬರದಿಂದ ಅನ್ನದಾತರಿಗೆ ತೀವ್ರ ನಷ್ಟ ಉಂಟಾಗುತ್ತಿದೆ. ಕೂಡಲೇ ನಕಲಿ ಗೊಬ್ಬರ ತಯಾರಿಕ ಕಂಪನಿಗಳ ಮೇಲೆ ದಾಳಿ ನಡೆಸುವಂತೆ ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g