May 19, 2024

MALNAD TV

HEART OF COFFEE CITY

ಪರಿಷಕೃತ ಮೀಸಲು ಅರಣ್ಯ ವರದಿಯಂತೆ ಭೂಮಿ ಗುರುತಿಸಿ ನೀಡಲು ಒತ್ತಾಯ

1 min read

ಚಿಕ್ಕಮಗಳೂರುಪರಿಷ್ಕೃತ ಮುಳ್ಳಯನ್ನಗಿರಿಯ ಮೀಸಲು ಅರಣ್ಯ ವರದಿಯ ಅನ್ವಯ ಗ್ರಾಮದ ಸ್ಥಳಿಯ ನಿವಾಸಿಗಳಿಗೆ ದಿನ ಬಳಕೆಗೆ ಯೋಗ್ಯವಾದ ಭೂಮಿಯನ್ನು ಗುರುತಿಸಿ ಕೊಡಬೇಕೆಂದು ಮುಳ್ಳಯನ್ನಗಿರಿಯ ಮೀಸಲು ಅರಣ್ಯ ವಿರೋಧಿ ಸಮಿತಿಯ ಮುಖಂಡ ವಿಜಯ್ ಕುಮಾರ್ ತಿಳಿಸಿದರು. ನಮ್ಮ ಹೋರಾಟದ ಫಲವಾಗಿ ಜಿಲ್ಲಾಡಳಿತ ಮುಳ್ಳಯ್ಯನಗಿರಿ ಮೀಸಲು ಅರಣ್ಯ ವದಿಯನ್ನು ಪರಿಷ್ಕೃತಗೊಳಿಸಿ 20600 ಎಕರೆಯಲ್ಲಿ 5000 ಎಕರೆ ಪ್ರದೇಶವನ್ನು ಬಿಟ್ಟು ಸುಮಾರು 15,897 ಎಕರೆ ಜಮೀನನ್ನು ಮೀಸಲು ಅರಣ್ಯ ಮಾಡಲು ಸರ್ಕಾರಕ್ಕೆ ವರದಿ ನೀಡಿದೆ. ಮೀಸಲು ಅರಣ್ಯ ಘೋಷಣೆಗೆ ವರದಿಯಲ್ಲಿ ಕಳಿಸಿರುವ 15,897 ಎಕರೆ ಜಮೀನಿನಲ್ಲಿ ಈಗಾಗಲೇ ಜನವಸತಿ ಹಾಗೂ 8 ಗ್ರಾಮ ಪಂಚಾಯಿತಿಗಳಿವೆ. ಮೀಸಲು ಅರಣ್ಯ ವರದಿಯನ್ನು ಬಹಳಷ್ಟು ಗ್ರಾಮದ ಜನರಿಗೆ ತಿಳಿಸದೆ ಮಾಡಿದ್ದಾರೆ. ಇದರಿಂದ ಅವರ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗಿತ್ತಿದೆ, ಕೂಡಲೇ ವರದಿಯನ್ನು ಸ್ಥಳ ವೀಕ್ಷಣೆ ನಡೆಸಿ ನೈಜ ಪರಿಸ್ಥಿತಿಯನ್ನು ಅವಲೋಕಿಸಿ ವರದಿಯನ್ನು ನೀಡಬೇಕು. ಬೇಡಿಕೆಯನ್ನು ಆಗ್ರಹಿಸಿ ಮಾರ್ಚ್ 3 ರಂದು ನಗರದ ತಾಲೂಕು ಕಛೇರಿಯಿಂದ ಆಜಾದ್ ಪಾರ್ಕ್ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕರುಗಳಾದ ಕೆ.ಕೆ ರಘು, ಉಮೇಶ್, ಶಾಂತಕುಮಾರ್, ಪ್ರವೀಣ್ ಕೆ.ಪಿ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!