May 3, 2024

MALNAD TV

HEART OF COFFEE CITY

ಸಂವಿಧಾನ ಜಾಗೃತಿ ರಥ ಸ್ತಬ್ಧ ಚಿತ್ರಕ್ಕೆ ಪೂಜೆ ತಡೆ ಅಲ್ಲಂಪುರ ಗ್ರಾಮದಲ್ಲಿ ಘಟನೆ

1 min read

 

 

ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಪೂಜೆ ಸಲ್ಲಿಸುವುದನ್ನು ಖಂಡಿಸಿ ಅಲ್ಲಂಪುರ ಬಳಿ ರಥ ತಡೆದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಟಾಚಾರಕ್ಕೆ ರಥ ಸಂಚರಿಸುತ್ತಿದ್ದು ಅಧಿಕಾರಿಗಳ ಗೈರು ಹಾಜರಿ ದೂರು ಸಹಾ ಕೇಳಿ ಬಂತು.  

 

 

 

ಸಂವಿಧಾನದ ಆಶಯ ಯಾವುದೇ ಧರ್ಮದ ಪರ ಇಲ್ಲ, ಪೂಜೆ ಸಲ್ಲಿಸುವುದು ವಯಕ್ತಿಕ ಆದರೆ ಸಂವಿಧಾನ ಪುಸ್ತಕಕ್ಕೆ ಪೂಜೆ ಮಾಡಬಾರದು ಎಂದು ವಿರೋಧಿಸಿ ಅಲ್ಲಂಪುರ ಗ್ರಾಮದ ಬಳಿ ಸ್ಥಳೀಯರು ಸಂವಿಧಾನ ಜಾಗೃತಿ ಜಾಥಾ ರಥ ತಡೆದು ಅಸಮಾಧಾನ ವ್ಯಕ್ತಪಡಿಸಿದರು. ಗಣರಾಜ್ಯೋತ್ಸವ ದಿನದಂದು ರಾಜ್ಯ ಸರ್ಕಾರದ ಮಹತ್ವದ ಸಂವಿಧಾನದ ಜಾಗೃತಿ ಜಾಥಾ ಗ್ರಾಮೀಣ ಮಟ್ಟದಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಥ ತೆರಳುತ್ತಿತ್ತು. ಅಲ್ಲಂಪುರ ಗ್ರಾಮದ ಸ್ಥಳೀಯರಾದ ಅನಿಲ್ ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಅಲ್ಲಂಪುರ ಗ್ರಾಮ ಪಂಚಾಯತಿ ಪಿಡಿಓ ಸ್ಥಳಕ್ಕೆ ಬಾರದಿರುವುದಕ್ಕೆ ಕಿಡಿ ಕಾರಿದರು. ಕಾಟಾಚಾರಕ್ಕೆ ಜಾಥಾ ಮಾಡುತ್ತಿದ್ದೀರಿ , ಸಾರ್ವಜನಿಕರಿಗೆ ಮಾಹಿತಿ ಸಹಾ ಸರಿಯಾಗಿ ಕೊಟ್ಟಿಲ್ಲ ಎಂದು ಅಸಮಾಧಾನಗೊಂಡರು. ಕೇವಲ 10 ಜನ ಮಾತ್ರ ಜಾಥಾದಲ್ಲಿ ಕಾಣಿಸುತ್ತಿದ್ದು ವ್ಯವಸ್ಥಿತವಾಗಿ ಪ್ರಚಾರ ನೀಡದೆ ಜನರು ಬರದಂತೆ ಆಗಿದೆ. ಈ ರಥದಿಂದ ಯಾವುದೇ ಪ್ರಯೋಜನ ಇಲ್ಲ ಕೆಲವೇ ಕೆಲವು ಸಿಬ್ಬಂದಿ ಅಧಿಕಾರಿಗಳು ಇದ್ದಾರೆ. ಅಲ್ಲಂಪುರ ಗ್ರಾಮ ಪಂಚಾಯತಿ ಸದಸ್ಯರು ಸಹಾ ಒಬ್ಬರೂ ಇಲ್ಲ ಪಿ.ಡಿ.ಒ ಕೂಡಾ ಕಾಣಿಸಲಿಲ್ಲ ಎಂದು ವಕೀಲ ಅನಿಲ್ ದೂರಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!