ಜಿಲ್ಲೆಯಲ್ಲಿ ನೂತನ ಸಾತ್ವಿಕ್ ಟಿ ವಿ ಎಸ್ ಶೋರೂಮ್ ಲೋಕಾರ್ಪಣೆ
1 min readಚಿಕ್ಕಮಗಳೂರು: ಚಿಕ್ಕಮಗಳೂರು-ಬೇಲೂರು ರಸ್ತೆಯ ಕೋಟೆಯ ಬಳಿ ನೂತನವಾಗಿ ನಿರ್ಮಿಸಿರುವ ಟಿ ವಿ ಎಸ್ ಕಂಪನಿಯ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟಗಾರರಾದ ಸಾತ್ವಿಕ್ ಟಿ ವಿ ಎಸ್ ಶೋರೂಮ್ ನನ್ನು ಬಸವ ತತ್ವ ಪೀಠದ ಪೀಠಾಧ್ಯಕ್ಷರಾದ ಡಾ. ಮರುಳಸಿದ್ದ ಸ್ವಾಮೀಜಿ ಅವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು.
ಸಾತ್ವಿಕ್ ಶೋರೂಂ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ಬಸವ ತತ್ವ ಪೀಠದ ಪೀಠಾಧ್ಯಕ್ಷರಾದ ಡಾ. ಮರುಳಸಿದ್ದ ಸ್ವಾಮೀಜಿ ಅವರು, ಟಿ ವಿ ಎಸ್ ಶೋರೂಮ್ ತೆರೆದಿರುವುದು ಒಂದು ಸಂತೋಷದ ಸಂಗತಿ. ಮಾಲೀಕರಾದ ಶಿವಪ್ರಸಾದ್ ಮತ್ತು ತಂಡದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಪಂಚದ ಉತ್ತಮ ಗುಣಮಟ್ಟದ ಕಂಪನಿಗಳಲ್ಲಿ ಟಿವಿಎಸ್ ಕೂಡ ಒಂದು. ಇದು ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಗ್ರಾಮೀಣ ಜನರಿಗೆ ಕಡಿಮೆ ದರದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಈ ಶಾಖೆಯ ಉತ್ಪನ್ನಗಳು ಇನ್ನು ಹೆಚ್ಚಿನ ಜನರಿಗೆ ತಲುಪುವಂತಾಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಶಾಸಕ ಹೆಚ್. ಡಿ ತಮ್ಮಯ್ಯ ಅವರು, ಟಿ ವಿ ಎಸ್ ಕಂಪನಿಯು ಒಳ್ಳೆಯ ಗುಣಮಟ್ಟದ ಬೈಕ್ ಗಳನ್ನು ಜನಸಾಮಾನ್ಯರಿಗೆ ನೀಡುತ್ತಾ ಬಂದಿದೆ. ಜನಸಾಮಾನ್ಯರಿಗೆ ಬೇಕಾದ ಎಲೆಕ್ಟ್ರಿಕ್ ವೆಹಿಕಲ್ ಗಳು ಇಲ್ಲಿವೆ. ಮಧ್ಯಮ ವರ್ಗದ ಜನರಿಗೆ ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ಬೆಲೆಯಲ್ಲಿ ಬೈಕ್ ಗಳು ಸಿಗುವುದರಿಂದ ಅವರಿಗೂ ಕೂಡ ಸಹಾಯವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಶೋರೂಮ್ ಜೊತೆಗೆ ಸರ್ವಿಸ್ ಸೆಂಟರ್ ಕೂಡ ಇವರು ಪ್ರಾರಂಭ ಮಾಡಿರುವುದು ಸಂತಸದ ಸಂಗತಿ. ಇದರ ಉಪಯೋಗವನ್ನು ಎಲ್ಲಾ ಜನಸಾಮಾನ್ಯರು ಪಡೆದುಕೊಳ್ಳಬೇಕು. ಕಂಪನಿಯು ಕೂಡ ಉತ್ತಮ ಗುಣಮಟ್ಟದ ಜೊತೆ ಉತ್ತಮ ಸರ್ವಿಸ್ನಲ್ಲ ನೀಡಬೇಕು ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g