ದಲಿತ ಸಮುದಾಯಗಳ ಅಭಿವೃದ್ಧಿ ಸಹಿಸದೆ ಪ್ರಚಾರದ ಅಮಲಿನಲ್ಲಿ ಅಪಪ್ರಚಾರ ವೆಂಕಟೇಶ್
1 min readಚಿಕ್ಕಮಗಳೂರು : ದಲಿತ ಸಮಾಜದ ಭಾಂದವರು ವಾಸಿಸುತ್ತಿರುವ ಸ್ಥಳಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣುತ್ತಿದೆ. ಇದನ್ನು ಸಹಿಸದೆ ಒಲ್ಲದವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸರಿಯಾದ ಇತಿಹಾಸವನ್ನು ತಿಳಿಸಯದೆ, ತಾವು ಅಂದುಕೊಂಡಿರುವುದನ್ನೆ ಇತಿಹಾಸ ಎಂದು ತಿಳಿದು ಪ್ರಚಾರಪಡಿಯುತ್ತಿರುವುದು ದೌರ್ಭಾಗ್ಯವಾಗಿದೆ ಎಂದು ಬಿ.ಜೆ.ಪಿ. ಪಕ್ಷದ ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ತಿರುಗೇಟು ನೀಡಿದರು.
ಅವರು ಪ್ರೆಸ್ಕ್ಲಬ್ನಲ್ಲಿ ಮಾತನಾಡುತ್ತ ಕುವೆಂಪು ಕಲಾಮಂದಿರದಲ್ಲಿ ಏಪ್ರಿಲ್ 14 ರಂದು ನಡೆದ ಡಾ|| ಬಿ.ಆರ್ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಿಗೆ ಅಪಮಾನ ಮಾಡಿದ್ದಾರೆ ಎನ್ನುವುದು ಹಾಸ್ಯಾಸ್ಪದವಾಗಿದೆ. ಪ್ರಚಾರದ ಅಮಲಿನಲ್ಲಿ ತೇಲುತ್ತಿರುವ ಕೆಲವು ವ್ಯಕ್ತಿಗಳು ತಮ್ಮನ್ನ ತಾವೇ ಬುದ್ದಿಜೀವಿಗಳೆಂದು ತಿಳಿದು ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದ್ದಾರೆ. ಶಾಸಕ ಸಿ.ಟಿ. ರವಿ 4 ಬಾರಿ ಆಯ್ಕೆಯಾಗಿರುವುದು ದಲಿತ ಸಮುದಾಯದ ಕೊಡುಗೆ ಅತಿ ಹೆಚ್ಚು ಇದೆ. ದಲಿತ ಸಮುದಾಯ ವಾಸಿಸುವ ಪ್ರದೇಶಗಳಿಗೆ ಹೋಗಿ ನಡೆದಿರುವ ಅಭಿವೃದ್ಧಿ ನೋಡಿ ನಂತರ ಮಾತನಾಡಲಿ ಬಹಿರಂಗ ಚರ್ಚೆಗೆ ಸಿದ್ದರಿದ್ದರಿದ್ದೇವ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಬಿ.ಜೆ.ಪಿ ಪಕ್ಷದ ಎಸ್.ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಮೋಹನ್, ಎಸ್.ಸಿ ಮೋರ್ಚಾದ ಗ್ರಾಮಂತರ ಅಧ್ಯಕ್ಷ ಹಂಪಯ್ಯ, ಎಸ್.ಸಿ ಮೋರ್ಚಾದ ನಗರಾಧ್ಯಕ್ಷ ನರಸಿಂಹ, ಸಿ.ಡಿ.ಎ ಸದಸ್ಯರಾದ ಹಿರೇಮಗಳೂರು ರಾಜಣ್ಣ, ಜಿಲ್ಲಾ ವಕ್ತಾರರಾದ ವರಸಿದ್ದಿ ವೇಣುಗೋಪಾಲ್, ಮಾಧ್ಯಮ ವಕ್ತಾರ ಡಿ. ಸುಧೀರ್ ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g