ವಕೀಲರ ಮೇಲೆ ದಾಖಲಾಗಿದ್ದ ಎಫ್ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ: ವಕೀಲರ ಸಂಭ್ರಮ
1 min readಚಿಕ್ಕಮಗಳೂರು: ವಕೀಲರ ಮೇಲೆ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ನ್ಯಾಯವಾದಿಗಳು ಇದರ ಮಾಹಿತಿ ತಿಳಿಯುತ್ತಿದ್ದಂತೆ ನಗರದ ಜಿಲ್ಲಾ ಕೋರ್ಟ್ ಹೊರಗೆ ಸಂಭ್ರಮದಿಂದ ಸಂತಸ ಹಂಚಿಕೊಂಡಿದ್ದಾರೆ.
ಕಾಫಿನಾಡಲ್ಲಿ ಪೊಲೀಸ್ ಹಾಗೂ ವಕೀಲರ ಗಲಾಟೆ ಪ್ರಕರಣದಲ್ಲಿ ವಕೀಲರ ಮೇಲೆ ದಾಖಲಾಗಿದ್ದ 4 ಎಫ್ಐಆರ್ ಗೆ ಉಚ್ಚನ್ಯಾಯಾಲ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ನಗರದ ಕೋರ್ಟ್ ಮುಂದೆ ವಕೀಲರ ಸಂಭ್ರಮಾಚರಣೆ ಮಾಡಿದ್ದಾರೆ. ವಕೀಲರ ಮೇಲೆ ಪೊಲೀಸರು ಹಾಕಿದ್ದ ಕೇಸ್ ಗೆ ಇದೀಗ ಹೈಕೋರ್ಟ್ ತಡೆ ನೀಡಿದ್ದು ಇದರೊಂದಿಗೆ ವಕೀಲರು ಮೇಲುಗೈ ಸಾಧಿಸಿದಂತಾಗಿದೆ. ವಕೀಲರ ಮೇಲಿನ ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ಇದೀಗ ಸಂಘರ್ಷ ಹೊಸ ರೂಪ ಪಡೆದಂತಾಗಿದೆ. ಐವರು ವಕೀಲರ ಮೇಲೆ ಪೊಲೀಸರ ಪ್ರತಿಭಟನೆ ನಂತರ ನಗರಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದರು. ಇದು ನಮ್ಮ ಮೊದಲ ಜಯ ಎಂದು ಕೋರ್ಟ್ ಮುಂದೆ ವಕೀಲರ ಸಂಭ್ರಮಿಸಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ವಕೀಲರಿಗೆ ನೈತಿಕ ಬೆಂಬಲ ನೀಡಲು ಹಾಸನ, ಮಂಗಳೂರು, ಶಿವಮೊಗ್ಗ, ಉಡುಪಿಯಿಂದ ಬಂದಿದ್ದ ವಕೀಲರು ಸಹಾ ಸಂಭ್ರಮದಲ್ಲಿ ಭಾಗಿಯಾಗಿದ್ರು, ಈ ನಡುವೆ ಕಾಫಿನಾಡ ಪೊಲೀಸರಿಗೆ ನೈತಿಕ ಬೆಂಬಲ ನೀಡಿದ್ದ ಹೊರಜಿಲ್ಲೆ ವಕೀಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಪೊಲೀಸರು ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g