ಬಕೆಟ್ ಹಿಡಿದು ಅಧಿಕಾರಕ್ಕೆ ಬಂದಿಲ್ಲ…! ಸಿ.ಟಿ. ರವಿ ಹೇಳಿದ್ದು ಯಾರಿಗೆ?
1 min readಚಿಕ್ಕಮಗಳೂರು : ಕುಮಾರಣ್ಣ, ದೇವೇಗೌಡ್ರು, ಸಿದ್ದರಾಮಯ್ಯರಿಗೆ ನಾನು ಬಕೆಟ್ ಹಿಡಿದಿಲ್ಲ, ನಾನು ಬಕೆಟ್ ಹಿಡಿದು ರಾಜಕಾರಣಿ ಆದವನಲ್ಲ ಎಂದು ಶಾಸಕ ಸಿ.ಟಿ. ರವಿ ಜಮೀರ್ ರವರಿಗೆ ತಿರುಗೇಟು ನೀಡಿದ್ದಾರೆ.
ಸಿ.ಟಿ.ರವಿಗೆ ಮುಸ್ಲಿಂ-ಹಿAದೂಗಳ ಮೇಲೆ ಪ್ರೀತಿ ಇಲ್ಲ, ಜಮೀರ್ ಹೇಳಿಕೆಗೆ ವ್ಯಂಗ್ಯವಾಗಿ ಮಾತನಾಡಿದ ಶಾಸಕ ಸಿ.ಟಿ. ರವಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಸ್.ವೈ ಮನೆಯಲ್ಲಿ ವಾಚ್ಮ್ಯಾನ್ ಆಗ್ತೀನಿ ಎಂದಿದ್ರಲ್ಲ ಆ ಮಾತನ್ನ ಜಮೀರ್ ಅಹಮದ್ ಮೊದಲು ಉಳಿಸಿಕೊಳ್ಳಲಿ. ನನ್ನ ನಿಯತ್ತನ್ನ ನನ್ನ ಕ್ಷೇತ್ರದ ಜನ ನೋಡಿ, 4 ಬಾರಿ ಗೆಲ್ಲಿಸಿದ್ದಾರೆ. ಮಂತ್ರಿ ಆಗಿದ್ದ ನಾನು ಪಕ್ಷದ ಕೆಲಸಕ್ಕಾಗಿ ರಾಜೀನಾಮೆ ನೀಡಿದ್ದೇನೆ. ಎಂದು ತಿರುಗೇಟು ನೀಡಿದರು.
ಇದೇ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿ.ಜೆ.ಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಿ.ಎಂ. ಎಂದು ಬೋರ್ಡ್, ಫ್ಲೆಕ್ಸ್ ಹಾಕಿಕೊಂಡ ತಕ್ಷಣ, ಸೋಶಿಯಲ್ ಮೀಡಿಯಾದಲ್ಲಿ ಹೇಳಿ, ಜನರ ಕೈನಲ್ಲಿ ಕೂಗಿಸುತ್ತಿದ್ದಂತೆ ಸಿಎಂ ಆಗ್ತೀನಾ ಕೊಟ್ಟಿದ್ದನ್ನೇ ಉಳಿಸಿಕೊಳ್ಳಲಾಗಿಲ್ಲ, ಇನ್ನು ಗಳಿಸೋದು ಉಂಟಾ, ಸಿದ್ದರಾಮಯ್ಯನವರ ಸ್ಟೈಲಲ್ಲೇ ಹೇಳೋದಾದ್ರೆ ಅಪ್ಪನ ಆಣೆ ಸಿಎಂ ಆಗಲ್ಲ ಎಂದು ಹೇಳಬಹುದು, ಜನ ಪಕ್ಷಕ್ಕೆ ಮತ ಹಾಕಿದ ಮೇಲೆ ಆ ಪಕ್ಷ ತೀರ್ಮಾನ ಮಾಡಬೇಕು, 8-10 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕಿAತ ಕಳೆದುಕೊಂಡಿದ್ದೇ ಹೆಚ್ಚು, ನೂರಕ್ಕೂ ನೂರು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದಕೊಳ್ಳುತ್ತೆ, ಛತ್ತಿಸ್ಗಡದಲ್ಲಿ ನೂರಕ್ಕೆ ನೂರರಷ್ಟು ಅಧಿಕಾರ ಕಳೆದುಕೊಳ್ಳುತ್ತೆ, ಕರ್ನಾಟಕದಲ್ಲಿ ಕಾಂಗ್ರೆಸ್ ಹಗಲುಗನಸು ಕಾಣುತ್ತಿದ್ದಾರೆ. ಈಶ್ವರಪ್ಪ ತನ್ನ ಮೇಲೆ ಆಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಮುಖ್ಯಮಂತ್ರಿಗಳು ಪರಿಶೀಲನೆ ಮಾಡಬೇಕು. ಪಕ್ಷ ಕಟ್ಟಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಕೂಡ ಒಬ್ಬರು. ಪಕ್ಷವನ್ನ ಈ ಹಂತಕ್ಕೆ ಬೆಳೆಸಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಒಬ್ಬರು ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g