ಸತ್ತೋಗಿದ್ದಾನೆಂದು ಹುಡುಕ್ತಿದ್ರೆ, ಅವ್ನೋ ರಸ್ತೆಯಲ್ಲಿ ಆರಾಮಾಗಿ ಓಡಾಡ್ಕೊಂಡಿದ್ದಾನೆ
1 min read
ಚಿಕ್ಕಮಗಳೂರು.14 ದಿನಗಳ ಹಿಂದೆಯೇ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆಂದು ನಗರಸಭೆ, ಅಗ್ನಿಶಾಮಕ, ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕ ಸಿಬ್ಬಂದಿ ಹಳ್ಳದಲ್ಲಿ ಹುಡುಕಾಡುತ್ತಿದ್ದರೆ ಕೊಚ್ಚಿ ಹೋದ ವ್ಯಕ್ತಿ ಆರಾಮಾಗಿ ರಸ್ತೆಯಲ್ಲಿ ಓಡಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಸತ್ತು ಹೋಗಿದ್ದಾನೆಂದು ಭಾವಿಸಿದ್ದ ವ್ಯಕ್ತಿಯನ್ನ ರಸ್ತೆಯಲ್ಲಿ ಕಂಡು ಅಧಿಕಾರಿಗಳೇ ಮೂಕವಿಸ್ಮಿತರಾಗಿದ್ದಾರೆ. ಜುಲೈ ಎರಡನೇ ವಾರದಲ್ಲಿ ಜಿಲ್ಲಾದ್ಯಂತ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿತ್ತು. ಈ ವೇಳೆ, ನಗರದ ಉಂಡೇದಾಸರಹಳ್ಳಿ ಬಳಿ ವ್ಯಕ್ತಿಯೋರ್ವ ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದನು. ಅವನ ಜೊತೆಯಲ್ಲಿದ್ದ ಪತ್ನಿ ಸೂರಿ…ಸೂರಿ…. (ಸುರೇಶ್) ಗೋಳಾಡುತ್ತಿದ್ದಳು. ಕಣ್ಣೀರಿಡುತ್ತಿದ್ದಳು.
ಕೂಡಲೇ ನೀರಿನ ವೇಗ ಅಬ್ಬರಿಸಿ ಬೊಬ್ಬರಿಯುತ್ತಿದ್ದರು ಕೂಡ ನಗರಸಭೆ, ಅಗ್ನಿಶಾಮಕ ಸಿಬ್ಬಂದಿಗಳು ಇಡೀ ಹಳ್ಳ ಹುಡುಕಿದ್ದರು. ಹುಡುಕುತ್ತಿದ್ದರು. ಆದರೆ, ನಾಪತ್ತೆಯಾದವನ ಶೋಧ ಮಾತ್ರ ಆಗಿರಲಿಲ್ಲ. ಆದರೂ ಕಾರ್ಯಚರಣೆ ನಿಲ್ಲಿಸಿರಲಿಲ್ಲ. ಆದರೆ, ಇಂದು ಬೆಳಗ್ಗೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಸಿಟಿ ರೌಂಡ್ಸ್ನಲ್ಲಿ ಇದ್ದ ವೇಳೆ ಹಳ್ಳದಲ್ಲಿ ಹುಡುಕಾಡುತ್ತಿದ್ದ ಸುರೇಶ ತನ್ನ ಪತ್ನಿ ಜೊತೆ ಆರಾಮಾಗಿ ಓಡಾಡ್ಕಂಡಿದ್ದ. ನೋಡಿದ ಕೂಡಲೇ ಗಾಡಿ ನಿಲ್ಲಸಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ವಿಚಾರಿಸಿದಾಗ ಅರ್ಧಂಬರ್ಧ ಮಾತನಾಡಿ ಎಸ್ಕೇಪ್ ಆಗಿದ್ದಾರೆ. ಅವರಿಗೆ ಪರಿಹಾರದ ಹಣ ಐದು ಲಕ್ಷ ಕೊಡಲು ಜಿಲ್ಲಾಡಳಿತ ಕೂಡ ಸಿದ್ಧವಾಗಿತ್ತು.
ಆದರೆ, ಸತ್ತಿದ್ದಾನೆಂದು ಭಾವಿಸಿದ್ದವನು ಬದುಕಿರೋದನ್ನ ಕಂಡ ವೇಣುಗೋಪಾಲ್ ಕೂಡಲೇ ಪೊಲೀಸರು, ತಹಶೀಲ್ದಾರ್, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಲ್ಲರಿಗೂ ವಿಷಯ ಮುಟ್ಟಿಸಿದ್ದಾರೆ. ಬಹುಶಃ ಐದು ಲಕ್ಷದ ಪರಿಹಾರದ ಹಣಕ್ಕೆ ಹೀಗೆ ಸಾವಿನ ನಾಟಕ ಮಾಡಿರಬಹುದು ಎಂದು ಶಂಕಿಸಲಾಗಿದೆ. ಗಂಡ-ಹೆಂಡತಿಯ ನಾಟಕ ನೋಡಿ ಅಧಿಕಾರಿಗಳೂ ಒಳ್ಳೆ ಹುಚ್ಚರ ಸಹವಾಸವಾಯ್ತು ಎಂದು ಸುಮ್ಮನಾಗಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g