ಕರಿಮಣಿ, ತಾಳಿ ಸೇರಿದಂತೆ ಮದುವೆಗೆ ಮಾಡಿಸಿದ ಅರ್ಧ ಕೆ.ಜಿ ಚಿನ್ನ ಸೀಜ್
1 min read
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿವಾಹಕ್ಕೆಂದು ಮಾಡಿಸಿದ ಚಿನ್ನಾಭರಣ ಕೂಡಾ ಸೀಜ್ ಆಗುವ ಪರಿಸ್ಥಿತಿ ನಿರ್ಮಾಣ ಆಗಿದ್ದು , ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಬಗ್ಗೆ ಇನ್ನೂ ತಲೆ ಕೆಡಿಸಿಕೊಳ್ಳದಿರುವುದು ಜನರಲ್ಲಿ ಜಾಗೃತಿಯ ಕೊರತೆ ಎದ್ದು ಕಾಣುತ್ತಿದೆ
ಭಾರತ ದೇಶದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಿ ಆರು ದಿನಗಳು ಕಳೆದಿವೆ. ಆದರೆ ರಾಜಕಾರಣಿಗಳಿಗೆ ಇದರ ಬಿಸಿ ತಟ್ಟಿದೆ ಹೊರತು ಜನರು ಈ ಬಗ್ಗೆ ತಲೆ ಕೆಡಿಸಕೊಂಡಿಲ್ಲ. ನೀತಿ ಸಂಹಿತೆ ಜಾರಿಯಾಗಿದೆ ಎಂದು ಆಡಳಿತ ಶಾಹಿ ಬೊಬ್ಬೆ ಬಡಿದುಕೊಂಡರು ಜನರು ಏಕೋ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಸೀಜ್ ಮಾಡಲಾಗುತ್ತಿರುವ ಹಣ ಚಿನ್ನ ಸೀರೆ ಕಾಟಾಚಾರಕ್ಕೆ ಎಂಬಂತಾಗಿದೆ. ಇವತ್ತಿನ ಭರ್ಜರಿ ಅರ್ಧ ಕೆ.ಜಿ ಚಿನ್ನ ಮಾತ್ರ ಮಗಳ ಮದುವೆಗೆಂದು ಮಾಡಿಸಿ ಸರ್ಕಾರಿ ಬಸ್ ನಲ್ಲಿ ಕಳಿಸಿದ ತಪ್ಪಿಗೆ ತಗಲಾಕಿಕೊಂಡಿರುವ ಘಟನೆ
ವರದಿಯಾಗಿದೆ. ಚಿಕ್ಕಮಗಳೂರು ಹೊರವಲಯದ ಮಾಗಡಿ ಚೆಕ್ ಪೋಸ್ಟ್ ನಲ್ಲಿ ಬೆಂಗಳೂರಿಂದ ಕಡೂರಿಗೆ ಬರುತ್ತಿದ್ದ ಕೆ.ಎಸ್ ಆರ್.ಟಿ.ಸಿ ಬಸ್ ತಡೆದು ತಪಾಸಣೆ ನಡೆಸಿದ ವೇಳೆ ಅರ್ಧ ಕೆ.ಜಿ ತೂಕದ ಚಿನ್ನಾಭರಣ ಸಿಕ್ಕಿಬಿದ್ದಿದೆ. ಕಡೂರಿನ ವ್ಯಕ್ತಿಯೊಬ್ಬ ತನ್ನ ಮಗಳ ಮದುವೆಗೆ ಮಾಡಿಸಿದ ಚಿನ್ನ ಬೆಂಗಳೂರಿಂದ ಬಸ್ ಕಂಡಕ್ಟರ್ ಕೈಗೆ ಕೊಟ್ಟು ಇದೀಗ ಪೇಚಿಗೆ ಸಿಲುಕುವಂತಾಗಿದೆ. ಬರೋಬ್ಬರಿ 13 ಲಕ್ಷದ 20 ಸಾವಿರ ಮೌಲ್ಯದ ಕರಿಮಣಿ ನೆಕ್ಲೆಸ್, ತಾಳಿ ಸೇರಿದಂತೆ ಆಭರಣ ವಶಕ್ಕೆ ಪಡೆಯಲಾಗಿದೆ. KA 18 F 0824 ಬಸ್ ಚಾಲಕ ಪ್ರಕಾಶ ನಿರ್ವಾಹಕ ರಾಜೇಂದ್ರ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g