May 6, 2024

MALNAD TV

HEART OF COFFEE CITY

ಹುಲಿ ದಾಳಿ 5 ಹಸುಗಳು ಸಾವು : ಒಂದು ಆಕಳು ಜೀವನ್ಮರಣ ಹೋರಾಟ

1 min read

ಹುಲಿ ದಾಳಿಗೆ ಐದು ಹಸುಗಳು ಮೃತಪಟ್ಟ ಘಟನೆ ಆಲ್ದೂರು ಸಮೀಪದ ಕಟಾರದಳ್ಳಿಯ ಕಾಫಿ ತೋಟವೊಂದರಲ್ಲಿ ನಡೆದಿದೆ. ಅಲ್ಲದೆ ಮತ್ತೊಂದು ಆಕಳು ಸಾವು ಬದುಕಿನ ನಡುವೆ ನರಳಾಡುತ್ತಿದ್ದು ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆನೆ ದಾಳಿಯಿಂದ ಇನ್ನೂ ರಿಲೀಫ್ ಸಿಗುವ ಮೊದಲೆ ರೈತರ ಜಾನುವಾರುಗಳಿಗೆ ಹುಲಿ ಕಾಟ ಕಾಡಲಾರಂಭಿಸಿದೆ. ಆಲ್ದೂರು ಸಮೀಪದ ಕಟಾರದಹಳ್ಳಿಯಚಂದ್ರಶೇಖರ, ಮುಳ್ಳಪ್ಪಯ್ಯ ಎಂಬುವರಿಗೆ ಸೇರಿದ ಹಸುಗಳು ಮೇಲೆ ವ್ಯಾಘ್ರ ದಾಳಿ ಮಾಡಿದೆ.ನಿನ್ನೆ ಮೇಯಲು ಹೋಗಿದ್ದ ಹಸುಗಳು ಮನೆಗೆ ಬಾರದೆ ಹತ್ತಿರದ ಕಾಫಿ ತೋಟದಲ್ಲಿ ಇಂದು ಮೃತದೇಹ ಆಗಿ ಪತ್ತೆಯಾಗಿವೆ. ಜೊತೆಗೆ ಮತ್ತೊಂದು ಹಸು ತೀವ್ರ ಗಾಯಗೊಂಡಿದ್ದು ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಲಿ ದಾಳಿಯಿಂದ ಗ್ರಾಮದ ಜನರು ಆತಂಕ ಪಡುವಂತಾಗಿದ್ದು ಓಡಾಡಲು ಭಯ ಪಡುವಂತಾಗಿದೆ. ಕಾಫಿ ತೋಟದ ಕಾರ್ಮಿಕರು ಕೆಲಸಕ್ಕೆ ಹೋಗದಂತಾಗಿದೆ. ಆಲ್ದೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಸೂಕ್ತ ಪರಿಹಾರವನ್ನು ನೀಡುವಂತೆ ಜಾನುವಾರುಗಳ ಮಾಲೀಕರು ಸರ್ಕಾರವನ್ನು ಮನವಿ ಮಾಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!