ಕಡೂರಿನಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಗಣೇಶ
1 min read
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸಮಾಜದವರು ಒಟ್ಟಾಗಿ ಸೇರಿ ಶ್ರೀ ಹಿಂದೂ – ಮುಸ್ಲಿಂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿ ಇಂದು ವಿಸರ್ಜನೆ ಕಾರ್ಯಕ್ರಮವನ್ನ ಅದ್ದೂರಿಯಾಗಿ ನಡೆಸಿದ್ರು. ಈ ಕೆ.ಬಿದರೆ ಗ್ರಾಮದ ವಿಶೇಷತೆ ಎಂದರೆ ಇಲ್ಲಿ 70% ಹಿಂದೂಗಳು ಮತ್ತು 30% ಮುಸ್ಲಿಂ ಬಾಂದವರು ಇದ್ದಾರೆ, ರಂಜಾನ್ ಮತ್ತು ಈದ್ ಮಿಲಾದ್ ಹಬ್ಬಗಳಲ್ಲಿ ಮುಸ್ಲಿಂ ಭಾಂದವರಿಗೆ ಹಿಂದೂ ಭಾಂದವರು ಜೊತೆಗೆ ಸೇರಿ ಆಚರಣೆ ಮಾಡುತ್ತಾರೆ, ಅದೇ ರೀತಿ ಗಣಪತಿ ಹಬ್ಬವನ್ನ ಹಿಂದೂ ಗಳ ಜೊತೆಗೆ ಸೇರಿ ಮುಸ್ಲಿಂ ಭಾಂದವರು ಆಚರಣೆ ಮಾಡೋದು ವಿಶೇಷವಾಗಿದೆ.
ಇನ್ನು ವೇದಿಕೆ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಮಠದ ಸ್ವಾಮಿಗಳು ಮತ್ತು ಮಸೀದಿ ಧರ್ಮ ಗುರುಗಳು ಈ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ್ರು. ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತಾನಾಡಿದ ಕಡೂರು ಶಾಸಕ ಕೆ.ಎಸ್.ಆನಂದ್ ಇಡೀ ಕರ್ನಾಟಕ ರಾಜ್ಯದಲ್ಲೇ ಮೊದಲಬಾರಿಗೆ ಹಿಂದೂ ಮುಸ್ಲಿಂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ, ಇದೆ ರೀತಿ ಒಗ್ಗಟಾಗಿ ಎಲ್ಲರೂ ಇರಬೇಕು ಎಂದರು .
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g