May 14, 2024

MALNAD TV

HEART OF COFFEE CITY

ಕಾಡಾನೆ ಸೆರೆಗೆ ಕಾರ್ಯಾಚರಣೆ ಪ್ರಾರಂಭ

1 min read

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ ಪ್ರಕರಣ ಸಿ.ಎಂ. ಸೂಚನೆ ಮೇರೆಗೆ ಕಾರ್ಯಾಚರಣೆ ಪ್ರಾರಂಭವಾಗಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಅರಣ್ಯ ವಿಭಾಗದಲ್ಲಿ ಎರಡು ತಿಂಗಳಿಗೆ ಇಬ್ಬರನ್ನ ಬಲಿ ಪಡೆದಿರುವ ಕಾಡಾನೆ‌ಯನ್ನು ಸೆರೆ ಹಿಡಿಯುವಂತೆ ಸಿ.ಎಂ. ಸೂಚನೆ ಮೇರೆಗೆ ಮೂರು ಸಾಕಾನೆ ನೇತೃತ್ವದಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದೆ.
ಹಿರಿಯ ಅರಣ್ಯಾಧಿಕಾರಿಗಳು ಸಿಬ್ಬಂದಿಗಳು ಸೇರಿ ಮೂರು ಸಾಕಾನೆಗಳಿಗೆ ಪೂಜೆ ಸಲ್ಲಿಸಿ, ಮತ್ತಾವರ ಫಾರೆಸ್ಟ್ ಐಬಿಯಿಂದ ಕಾರ್ಯಾಚರಣೆ ಆರಂಭ ಮಾಡಿದರು. ಭುವನೇಶ್ವರಿ ಟೀಂ ಕಾಡಿಗಟ್ಟಲು ಅರಣ್ಯ ಅಧಿಕಾರಿಗಳು ಅದರ ಚಲನ-ವಲನ ಅರಿತು ಆಲ್ದೂರು, ಅರೆ‌ನೂರು, ಕಣತಿ, ಕಂಚಿಕಲ್ ದುರ್ಗಾ ಸುತ್ತಮುತ್ತ ಸೇರಿದಂತೆ ಕಾಡಿಗಟ್ಟುವವರೆಗೂ ನಿರಂತರ ಕಾರ್ಯಚರಣೆ ಮಾಡಲಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!