ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಸಾವು
1 min readಚಿಕ್ಕಮಗಳೂರು : ಕಾಫಿನಾಡಲ್ಲಿ ಸುರಿಯುತ್ತಿರುವ ಮಳೆಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾಫಿ ತೋಟದ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ಮರ ಬಿದ್ದು ಸ್ಥಳದಲ್ಲೇ ಸಾವನಪ್ಪಿನಪ್ಪಿರುವ ಘಟನೆ ಕಳಸ ತಾಲೂಕಿನ ಹೊರನಾಡಿನಲ್ಲಿ ಸಂಭವಿಸಿದೆ.
ಮಲೆನಾಡು ಭಾಗದಲ್ಲಿ ವರುಣ ವಾರಕ್ಕು ಹೆಚ್ಚು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವದರಿಂದ ಅಲ್ಲಲ್ಲಿ ಗುಡ್ಡ, ರಸ್ತೆ ಕುಸಿತ, ಮರ ಬೀಳುವ ದುರ್ಘಟನೆಗಳು ಸಂಭವಿಸುತ್ತಿದೆ. ಉತ್ತರ ಕರ್ನಾಟಕದ ಹರಪನಹಳ್ಳಿ ಮೂಲದ 22 ವರ್ಷದ ಪ್ರಿಯಾಂಕ ತಮ್ಮ ಜೊತೆಗಾರರೊಂದಿಗೆ ಕಾಫಿ ತೋಟದಲ್ಲಿ ಕೂಲಿ ಹರಸಿ ಕಳಸ ತಾಲೂಕಿನ ಹೊರನಾಡಿನ ತೋಟ ಒಂದಕ್ಕೆ ಬಂದಿದ್ದರು. ಎಂದಿನAತೆ ಕೂಲಿ ಕೆಲಸಕ್ಕೆ ಕಾಫಿ ತೋಟಕ್ಕೆ ತೆರಳಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಫಿ ತೋಟದ ಮರವೊಂದು ದುರ್ದೈವಿಯಾದ ಪ್ರಿಯಾಂಕಳ ಮೇಲೆ ಬಿದ್ದಿದೆ. ಮರದ ನಡುವೆ ಸಿಲುಕಿದ ಪ್ರಿಯಾಂಕ ಸ್ಥಳದಲ್ಲೇ ಮೃತಪಟ್ಟಿದ್ದು, ಈ ದುರ್ಘಟನೆಯು ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g