ಮಲೆನಾಡ ಶಿಗ್ಲಿ ಬಸ್ಯನ ರೋಚಕ ಎಸ್ಕೇಪ್ ಕಹಾನಿ..!
1 min readಚಿಕ್ಕಮಗಳೂರು: ಇನ್ನೇನು ಎರಡೇ ದಿನ ಸಂಕ್ರಾಂತಿ ಕಳೆಯುತ್ತಿದ್ದಂತೆ ಮತ್ತೆ ಆತ ಹೋಗಬೇಕಿತ್ತು ಸೆರೆಮನೆಗೆ, ಜೈಲೂಟ ತಿನ್ನೋಕೆ ಇಷ್ಟವಿಲ್ಲದ ಆ ಖದೀಮ ಮಾಡಿದ್ದು ಮಾಸ್ಟರ್ ಪ್ಲಾನ್, ವಾಸಿಯಾಗಿದ್ದ ಗುಂಡೇಟಿನ ಗಾಯ ಮಾಯದೇ ಇದೆ ಎನ್ನುತ್ತಲೇ ಕುಂಟುತ್ತಾ ಭಾರೀ ಸ್ಕೆಚ್ ಹಾಕಿದ್ದ ಈ ಮಾಗಲ ಮೂದೇವಿ ಪೂರ್ಣೇಶ ಪೊಲೀಸರ ಜೇಬಿಗೆ ಕೈ ಹಾಕಿದ್ದ.
ಕಳೆದ ರಾತ್ರಿ ಮಲ್ಲೇಗೌಡ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಪ್ರಿಝನ್ ಸೆಲ್ ನಿಂದ ಪರಾರಿ ಆಗಿರುವ ಪೂರ್ಣೇಶ ನನಗೆ ತುಂಬಾ ಬಯಕೆಯಾಗಿದೆ ಎಂದು ಚಿಕನ್ ತರಿಸಿಕೊಂಡು ಪೊಲೀಸರಿಗೂ ಕೊಟ್ಟು ಗೊರಕೆ ಹೊಡೆಯೋತರ ನಾಟಕ ಮಾಡಿದ್ದಾನೆ. ಸ್ವಲ್ಪ ಎಣ್ಣೆ ಬೇರೆ ಹಾಕಿದ್ನಂತೆ, ಮಧ್ಯ ರಾತ್ರಿ ಆಗುತ್ತಿದ್ದಂತೆ ಈತನನ್ನು ಕಾಯುತ್ತಿದ್ದ ಪೊಲೀಸಪ್ಪ ಗಾಢ ನಿದ್ರೆಗೆ ಹೋಗುತ್ತಿದ್ದಂತೆ ತನ್ನ ವರಸೆ ತೋರಿಸಿದ್ದಾನೆ. ಪೇದೆಯ ಕಿಸೆಯೊಳಗಿದ್ದ ಕೀಲಿ ಹಾರಿಸಿ ಕಬ್ಬಿಣದ ಬಾಗಿಲ ತೆಗೆದು ಎಸ್ಕೇಪ್ ಆಗಿದ್ದಾನೆ.
ಕುಂಟನಂತೆ ನಟಿಸಿದ್ದು ಯಾರಿಗೂ ಗೊತ್ತೇ ಆಗಲಿಲ್ಲ..
ಮೊದಲೇ ಇದಕ್ಕೆಲ್ಲ ಪ್ಲಾನ್ ಮಾಡಿಕೊಂಡಿದ್ದ ರೌಡಿ ಶೀಟರ್ ಖಾಂಡ್ಯ ಖದೀಮ ನಡೆಯಲು ಸಾಧ್ಯವೇ ಇಲ್ಲ ಎಂಬಂತೆ ನಟಿಸಿ ಬರೀ ವೀಲ್ ಚೇರ್ ನಲ್ಲೇ ಓಡಾಡುತ್ತಿದ್ದ, ಗುಮಾನಿ ಬಾರದ ಪೊಲೀಸರು ಹ್ಯಾಂಕ್ ಕಪ್ ಕೂಡಾ ಹಾಕಿರಲಿಲ್ಲ, ಅಲ್ಲೇ ನೋಡಿ ತನ್ನ ಚಾಲಾಕಿ ಬುದ್ದಿ ಪ್ರಯೋಗಿಸಿ ಮಂಕುಬೂದಿ ಎರಚೋಕೆ ಸಾಧ್ಯವಾಗಿದ್ದು ಈ ಮಲೆನಾಡ ಶಿಗ್ಲಿ ಬಸ್ಯನಿಗೆ ….
ಸದ್ಯ ಕೈ ಕೈ ಹಿಸುಕಿಕೊಳ್ಳುತ್ತಿರುವ ಬಾಳೇಹೊನ್ನೂರು ಹಾಗೂ ಡಿ.ಎ.ಆರ್. ಪೊಲೀಸರು ಎಸ್ಕೇಪ್ ಗಿರಾಕಿ ಪೂರ್ಣೇಶನ ಖತರ್ನಾಕ್ ಐಡಿಯಾ ಮುಂದೆ ಸೋತು ಸುಣ್ಣವಾಗಿದ್ದಾರೆ. ಬೆಂಗಳೂರು ಶಿವಮೊಗ್ಗ ಎಲ್ಲಾ ಕಡೆ ಚಿಕಿತ್ಸೆ ಕೊಡಿಸಿ ಗುಂಡೇಟಿನ ಗಾಯ ವಾಸಿ ಮಾಡಿ ಜೈಲಿಗೆ ಕಳುಹಿಸುವ ಸನ್ನಿಹದಲ್ಲಿ ಎಡವಟ್ಟು ಮಾಡಿಬಿಟ್ಟಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g