April 28, 2024

MALNAD TV

HEART OF COFFEE CITY

ಕೆ.ಡಿ.ಪಿ ಸಭೆ ವೇಳೆ ಸಚಿವರ ಹಿಂದೆ ಕುಳಿತ ಅಧಿಕಾರಿಯಿಂದ ಗೊಂದಲ

1 min read

ಚಿಕ್ಕಮಗಳೂರು: ಕೆ.ಡಿ.ಪಿ ಸಭೆಯಲ್ಲಿ ಸಣ್ಣ ಉಳಿತಾಯ ಇಲಾಖೆ ಅಧಿಕಾರಿಯೊಬ್ಬರು ಸಚಿವರ ಹಿಂದೆ ಕುಳಿತು ಏಕಾಏಕಿ ಎದ್ದು ನಿಂತು ಗೊಂದಲ ಸೃಷ್ಟಿಸಿದ ಘಟನೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಗಂಭೀರ ಚರ್ಚೆ ನಡೆಯುವ ವೇಳೆ ಸಚಿವರು ಶಾಸಕರ ಹಿಂದೆ ಕುಳಿತಿದ್ದ ಅಧಿಕಾರಿ ಒಬ್ಬ ಏಕಾಏಕಿ ಎದ್ದು ನಿಂತು ಕೆಲಕಾಲ ಗೊಂದಲ ಸೃಷ್ಟಿಸಿದರು. ಬರಗಾಲ ನಿರ್ವಹಣೆ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆಯುತ್ತಿದ್ದ ವೇಳೆ ಒಮ್ಮೆಲೆ ಎದ್ದು ನಿಂತು ನಾನು ರೈತರ ಪರ ಈ ಬೆಳೆ ಬೆಳೆಯಿರಿ ಆ ಬೆಳೆ ಬೇಡ ಎನ್ನುತ್ತಾ ಎಂದು ನಿಂತರು, ಬೆರಗಾದ ಸಚಿವರು ಶಾಸಕರು ಯಾರು ನೀವು ಎಂದಾಗ ನಾನು ಸಣ್ಣ ಉಳಿತಾಯ ಇಲಾಖೆಯ ಉಪನಿರ್ದೇಶಕ ಶಿವರುದ್ರಪ್ಪ ಎನ್ನುತ್ತಾರೆ. ಈ ವೇಳೆ ಅವರನ್ನು ಅಧಿಕಾರಿಗಳು ಕೂರುವ ಸ್ಥಳಕ್ಕೆ ಕಳುಹಿಸಲಾಯಿತು. ಆಕ್ರೋಶ ಗೊಂಡ ಪರಿಷತ್ ಸದಸ್ಯರ ಎಸ್.ಎಲ್ ಭೋಜೇಗೌಡ ಅವರನ್ನು ಹೊರ ಕಳುಹಿಸಲು ಹೇಳುತ್ತಾರೆ. ಈ ವೇಳೆ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯ್ತಿ ಸಿ.ಇ.ಓ ಗೋಪಾಲಕೃಷ್ಣ ಸಭೆಗೆ ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!