ಮಾಜಿ ಐ.ಪಿ.ಎಸ್ ಅಣ್ಣಾಮಲೈ ತಮಿಳುನಾಡು ಸಿ.ಎಂ ಆಗುತ್ತಾರೆ : ವಿನಯ್ ಗುರೂಜಿ
1 min read
ಮಾಜಿ ಐ.ಪಿ.ಎಸ್ ಅಣ್ಣಾಮಲೈ ಮುಂದೆ ತಮಿಳುನಾಡು ಮುಖ್ಯಮಂತ್ರಿ ಆಗುತ್ತಾರೆ ಎಂದು ಅವಧೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದ ಮಾಜಿ ಐ.ಪಿ.ಎಸ್ ಕೆ. ಅಣ್ಣಾಮಲೈ ಮುಂದೊಂದು ದಿನ ತಮಿಳುನಾಡಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಈ ಮೊದಲೇ ಹೇಳಿದ್ದಾಗಿ ಗೌರಿಗದ್ದೆ ಅವಧೂತ ವಿನಯ್ ಗುರೂಜಿ ತಿಳಿಸಿದರು. ಕಡೂರಿನ ಯಗಟಿಯಲ್ಲಿ ನಡೆದ ಕುಮಾರವ್ಯಾಸ ಜಯಂತಿ ವೇಳೆ ಆಶೀರ್ವಚನ ನೀಡುವ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ ವಿನಯ್ ಗುರೂಜಿ ಅಣ್ಣಾಮಲೈ ಚಿಕ್ಕಮಗಳೂರಲ್ಲಿ ಭೇಟಿ ಆಗಿದ್ದಾಗಲೇ ನೀವು ಮುಂದೆ ಒಂದು ದಿನ ತಮಿಳುನಾಡು ಮುಖ್ಯಮಂತ್ರಿ ಆಗುತ್ತೀರಾ ಎಂದು ಹೇಳಿದ್ದಾಗಿ ತಿಳಿಸಿದರು. ಅಲ್ಲದೇ ನಿಮ್ಮಿಂದ ತಮಿಳುನಾಡಲಿನಲ್ಲಿ ಧರ್ಮ ಬೆಳೆಯುತ್ತದೆ ನೀವು ತಿರುವಣ್ಣಾಮಲೈ ದೇವಾಲಯಕ್ಕೆ ಸದಾ ಭೇಟಿ ಕೊಡುತ್ತಿರಿ ಎಂದು ಅಣ್ಣಾಮಲೈ ಅವರಿಗೆ ಹೇಳಿದ್ದಾಗಿ ವಿನಯ್ ಗುರೂಜಿ ಸ್ಮರಿಸಿದರು.
ಚಿಕ್ಕಮಗಳೂರಿನಲ್ಲಿ ಭೇಟಿ ಮಾಡಿದ್ದಾಗಲೇ ಎರಡು ಸೇಬಿನ ಹಣ್ಣುಗಳನ್ನು ಕೊಟ್ಟು ಆಶೀರ್ವದಿಸಿ ಮುಂದೆ ಸಿ.ಎಂ ಆಗುತ್ತೀರ ಎಂದು ಕೆಲವು ವರ್ಷಗಳ ಹಿಂದೆ ಹೇಳಿದ್ದೆವು ಎಂದು ವಿನಯ್ ಗುರೂಜಿ ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g