April 29, 2024

MALNAD TV

HEART OF COFFEE CITY

ಬೇಲೂರಿನ ಬಿಕ್ಕೋಡಿನ ಬೀಟಮ್ಮ ಇದೀಗ ಕೆ.ಆರ್ ಪೇಟೆಯಲ್ಲಿ ಪ್ರತ್ಯಕ್ಷ..!

1 min read

ಚಿಕ್ಕಮಗಳೂರು: ಬೇಲೂರಿನ ಬಿಕ್ಕೊಡಿನ ಬೀಟಮ್ಮ 30 ಸಂಖ್ಯೆಯ ಕುಟುಂಬಸ್ಥರ ಜೊತೆ ಸೇರಿ ಚಿಕ್ಕಮಗಳೂರು ಹೊರವಲಯದ ಕೆ.ಆರ್ ಪೇಟೆ ಸುತ್ತ ಮುತ್ತ ದಾಂಗುಡಿ ಇಟ್ಟಿದ್ದಾಳೆ.

ಬೇಲೂರಿನಲ್ಲಿ ಬೀಟಮ್ಮ ಟೀಂ ಇದೀಗ ಚಿಕ್ಕಮಗಳೂರಿನಲ್ಲಿ ಪ್ರತ್ಯಕ್ಷವಾಗಿದೆ. ನಗರದ ಹೊರವಲಯದ ಕೆ.ಆರ್ ಪೇಟೆ ಮಾವಿನ ಕೆರೆ ಬಳಿ ಇಂದು ಕಾಣಿಸಿಕೊಂಡಿವೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡಬೇಕಾಗಿ ಅರಣ್ಯ ಇಲಾಖೆ ಅಕ್ಕಪಕ್ಕದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದು, ಗ್ರಾಮದ ಸುತ್ತ ಮುತ್ತ ಬೀಟಮ್ಮನ ಬೃಹತ್ ಗುಂಪಿನ ಕಾಡಾನೆಗಳು ಸಂಚರಿಸುತ್ತಿದ್ದು, ಜನರಲ್ಲಿ ಆತಂಕವನ್ನು ಮೂಡಿಸಿದೆ. ಬೇಲೂರು ಮಾರ್ಗವಾಗಿ ಜಿಲ್ಲೆಗೆ ಆಗಮಿಸಿರಬಹುದು ಎಂದು ಅರಣ್ಯ ಇಲಾಖೆ ಮಾಹಿತಿ ತಿಳಿಸಿದ್ದು, ಕಳೆದ ಕೆಲ ದಿನಗಳಿಂದ ಜಿಲ್ಲೆಯ ಕೆಲ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಜನವಸತಿ ಪ್ರದೇಶ, ಸಾರ್ವಜನಿಕ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಭೀತಿ ಉಂಟುಮಾಡಿದೆ.
ಕಾಡಾನೆಗಳ ದಂಡು ತೋಟ, ಭತ್ತದ ಗದ್ದೆ, ಕಬ್ಬಿನ ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಟ ಮಾಡುತ್ತಿದ್ದು, ಅಪಾರ ಪ್ರಮಾಣದ ಕೃಷಿ, ಬೆಳೆ ನಾಶ ಮಾಡಿವೆ. ಬೇಲೂರಿನ ಬೀಟಮ್ಮ ಖ್ಯಾತಿಯ ಕಾಡಾನೆ 30 ಕ್ಕೂ ಹೆಚ್ಚು ಸಂಖ್ಯೆಯ ಆನೆಗಳನ್ನು ಒಟ್ಟುಗೂಡಿಸಿಕೊಂಡು ಧಾವಿಸಿದೆ. ಬೀಟಮ್ಮ ತಂಡದ ಕಾಡಾನೆಗಳ ಹಿಂಡನ್ನು ಆದಷ್ಟು ಬೇಗ ಕಾಡಿಗೆ ಅಟ್ಟಬೇಕೆಂದು ಜನರು ಅರಣ್ಯ ಇಲಾಖೆಗೆ ಒತ್ತಾಯ ಮಾಡುತ್ತಿದ್ದಾರೆ. ಸದ್ಯ ಇಲ್ಲೇ ಬೀಡು ಬಿಟ್ಟಿದ್ದು ಬೇಲೂರಲ್ಲಿ ಬೆಟ್ಟ ಆನೆ ಮರದ ಮೇಲೆ ಕುಳಿತವನನ್ನು ಸೊಂಡಲಿಂದ ಎಳೆದು ಎಸೆದ ನಂತರ ವೂ ಕೆ.ಆರ್ ಪೇಟೆಯಲ್ಲೂ ಜನ ಆನೆ ಹಿಂಡು ನೋಡಲು ಮರವೇರಿ ಕುಳಿತು ಮತ್ತೆ ಅದೇ ತಪ್ಪು ಮಾಡುತ್ತಿದ್ದಾರೆ. ಬೀಟಮ್ಮ ತಂಡದಲ್ಲಿ ಬೃಹತ್ ಭೀಮ ಅನೆಯು ಸೇರಿಕೊಂಡಿರುವುದು ಅರಣ್ಯ ಇಲಾಖೆ ಮತ್ತು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕವನ್ನು ದುಪ್ಪಟ್ಟುಗೊಳಿಸಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!