ಜಿಲ್ಲಾ ಉತ್ಸವಕ್ಕೆ ಪ್ರಚಾರದ ಕೊರತೆಯಿಂದ ಸಾರ್ವಜನಿಕರಿಂದ ದೂರ ಉಳಿದ ನಡೆ ಹಬ್ಬ
1 min readಚಿಕ್ಕಮಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಉತ್ಸವ ಕ್ರೀಡಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಅಂಗವಾಗಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ, ಚಿಕ್ಕಮಗಳೂರು ನಡೆ ಹಬ್ಬ, ರಾಜ್ಯ ಮಟ್ಟದ ವಾಲಿಬಾಲ್, ಕಬಡ್ಡಿ ಮತ್ತು ಯೋಗ ಗ್ರಾಮೀಣ ಕ್ರೀಡಾಕೂಟ ೨೦೨೨-೨೩ ಹಾಗೂ ವೈವಿದ್ಯಮಯ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮವನ್ನು ನೇತಾಜಿ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಿ.ಟಿ. ರವಿಯವರು ಹಸಿರು ನಿಶಾನೆ ತೋರಿಸುವ ಮೂಲಕ ಕ್ರೀಡಾ ಕೂಟಗಳಿಗೆ ಚಾಲನೆ ನೀಡಿದರು. ನೇತಾಜಿ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇವಲ ಶಾಲಾ – ಕಾಲೇಜು ವಿದ್ಯಾರ್ಥಿಗಳು, ಕೆಲವು ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಕೆಲವು ಜನಪ್ರತಿನಿಧಿಗಳು ಭಾಗವಹಿಸಿದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಇಲ್ಲದಿರುವುದು ಕಂಡು ಬಂದಿತು.
ಕಳೆದ ಬಾರಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಪ್ರಚಾರದಿಂದಾಗಿ ಜನಸಾಮಾನ್ಯರು ಸಹ ಸ್ವಯಂ ಪ್ರೇರಣೆಯಿಂದ ಉತ್ಸಾಹದಿಂದ ಪಾಲ್ಗೊಂಡು, ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಉತ್ಸವ ಕಳೆಗಟ್ಟಿತ್ತು. ಆದರೆ ಈ ಬಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉತ್ಸವ ಪ್ರಚಾರ ಸಮಿತಿಯು ಕಳೆದ ಬಾರಿಯಂತೆ ಈ ಬಾರಿ ಸ್ಥಳೀಯ ಮಾಧ್ಯಮಗಳಲ್ಲಿ ಉತ್ತಮ ಪ್ರಚಾರ ನೀಡದಿರುವುದರಿಂದಲೋ ಈ ಬಾರಿ ಸಾರ್ವಜನಿಕರ ಪಾಲ್ಗೋಳ್ಳದಿರುವುದು ಆರಂಭದಲ್ಲೇ ವಿಘ್ನದಂತಾಗಿದ್ದು, ಇದು ಹಿಂದಿನ ವರ್ಷದ ಜಿಲ್ಲಾ ಉತ್ಸವದ ಗೆಲುವಿನಿಂದ ಪ್ರಚಾರ ಮಾಡದೆ ಮೈರೆತಂತಾಗಿದೆ.
ಸಾರ್ವಜನಿಕರು ಪಾಲ್ಗೊಳ್ಳದೆ ಜಿಲ್ಲಾ ಉತ್ಸವದ ನಡೆದ ನಡೆಹಬ್ಬವು ಕೇವಲ ಕ್ರೀಡಾಪಟುಗಳ, ಸಂಘ ಸಂಸ್ಥೆಗಳ ಮುಖಂಡರ, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಡೆ ಹಬ್ಬವಾಗಿ ಕಂಡು ಬಂದಿದ್ದು, ಜಿಲ್ಲಾ ಉತ್ಸವ ಪ್ರಚಾರ ಸಮಿತಿಯು ಆರಂಭದಲ್ಲೇ ಎಚ್ಚೆತ್ತುಕೊಳ್ಳದಿದ್ದರೆ ಆರಂಭದಲ್ಲಿ ಕಾಡುತ್ತಿರುವ ವಿಘ್ನ ಜಿಲ್ಲಾ ಉತ್ಸವದಲ್ಲಿ ಕರಿ ಛಾಯೆ ಮೂಡುವುದರಲ್ಲಿ ಅನುಮಾನವಿಲ್ಲ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g