April 27, 2024

MALNAD TV

HEART OF COFFEE CITY

ವೈದ್ಯರ ನಿರ್ಲಕ್ಷ ಆರೋಪ: ಹೆರಿಗೆ ವೇಳೆ ಗಂಡು ಶಿಶು ಮರಣ

1 min read

ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷದಿಂದ ಹೊಟ್ಟೆಯಲ್ಲೇ ಗಂಡು ಶಿಶು ಮರಣ ಹೊಂದಿದೆ ಎಂದು ಆರೋಪಿಸಿ ಬಾಣಂತಿಯ ಕುಟುಂಬಸ್ಥರು ಹೆರಿಗೆ ಆಸ್ಪತ್ರೆ ವೈದ್ಯ ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಘಟನೆ ನಡೆದಿದೆ.

ಸಖರಾಯಪಟ್ಟಣದ ಮಡಿಕೆ ಹೊಸಳ್ಳಿಯ ಶಿಲ್ಪ ಎಂಬ ಮಹಿಳೆಗೆ ಹೆರಿಗೆ ವೇಳೆ ಗಂಡು ಶಿಶು ಮೃತಪಟ್ಟಿದ್ದು ಇದಕ್ಕೆ ವೈದ್ಯರೆ ಕಾರಣ ಎಂದು ಶಿಲ್ಪ ಕುಟುಂಬಸ್ಥರು ಆರೋಪಿಸಿದ್ದಾರೆ. ಹತ್ತು ತಿಂಗಳ ಗರ್ಭಿಣಿಯಾಗಿದ್ದ ಶಿಲ್ಪ ಚೊಚ್ಚಲ ಹೆರಿಗೆಗೆ ನಗರದ ಹೆರಿಗೆ ಆಸ್ಪತ್ರೆಗೆ ನಿನ್ನೆ ಬೆಳಿಗ್ಗೆ ಆಗಮಿಸಿ ಇನ್ ಪೇಶೆಂಟ್ ಆಗಿ ದಾಖಲಿಸಿಕೊಂಡು ನಂತರ ಸಂಜೆ ವೇಳೆಗೆ ಆಗಮಿಸಿದ ವೈದ್ಯ ಪುಟ್ಟಪ್ಪ ಮಗು ಬೆಳವಣಿಗೆ ಇಲ್ಲ ಸಿಜೇರಿಯನ್ ಮಾಡಬೇಕು ಎಂದು ತಿಳಿಸಿದರು ಎಂದ ಶಿಲ್ಪ ತಾಯಿ ಇಂದಿರಮ್ಮ ಇಂದು ಮುಂಜಾನೆ ಬಂದು ಹೆರಿಗೆ ಮಾಡಿಸಿದ ವೇಳೆ ಮಗು ಹೊಟ್ಟೆಯಲ್ಲೇ ಮೃತಪಟ್ಟಿದೆ ಎನ್ನುತ್ತಿದ್ದಾರೆ ಎಂದು ಹೇಳುತ್ತಿರುವ ವೈದ್ಯರೇ ಇದಕ್ಕೆ ಹೊಣೆ ಎಂದು ಆರೋಪಿಸಿದ್ದಾರೆ. ಹೊಟ್ಟೆಯಲ್ಲೇ ಗಂಡು ಶಿಶು ಸಾವನ್ನಪ್ಪಿದಕ್ಕೆ ಆಕ್ರೋಶಗೊಂಡ ಶಿಲ್ಪ ಕುಟುಂಬಸ್ಥರು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮೋಹನ್ ಬಳಿ ಒತ್ತಾಯಿಸಿದರು. ಶಿಲ್ಪ ಮನೆಯವರು ಹೆರಿಗೆ ಆಸ್ಪತ್ರೆ ಸಿಬ್ಬಂದಿ ಮೇಲೆಯೂ ಕೆಂಡಾಮಂಡಲರಾದ ವೇಳೆ ಪರಿಸ್ಥಿತಿ ನಿಯಂತ್ರಿಸಲು ಹತ್ತಾರು ನಗರ ಠಾಣೆ ಪೊಲೀಸರನ್ನು ಹೆರಿಗೆ ಆಸ್ಪತ್ರೆ ಬಳಿ ಬಂದೋಬಸ್ತ್ ಗೆ ನಿಯೋಜಿಸ ಲಾಯಿತು. ಶಿಲ್ಪ ಖುದ್ದು ನರ್ಸ್ ಆಗಿದ್ದು ಸಿಜೇರಿಯನ್ ಮಾಡಿಸುವಂತೆ ಹೇಳಿದರೂ ನಾರ್ಮಲ್ ಡಿಲವರಿ ಆಗಲಿ ಎಂದು ಸುಮ್ಮನ್ನಿದ್ದರು ಎನ್ನಲಾಗುತ್ತಿದ್ದು, ಆಕೆಯ ಪತಿ ಬೆಂಗಳೂರಿನಲ್ಲೇ ಖಾಸಗಿ ಕಂಪನಿ ನೌಕರನಾಗಿದ್ದು ಸದ್ಯ ಮೃತ ಗಂಡು ಶಿಶುವನ್ನು ಬೆಂಗಳೂರಿನ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಗೆ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!