May 16, 2024

MALNAD TV

HEART OF COFFEE CITY

ವಕೀಲರು-ಪೊಲೀಸರ ಸಂಘರ್ಷ: ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಧಿಕಾರಿ ನಿಷ್ಕ್ರಿಯ ‘ಕಲ್ಮರಡಪ್ಪ’ ಆರೋಪ

1 min read

ಚಿಕ್ಕಮಗಳೂರು: ವಕೀಲರು ಹಾಗೂ ಪೊಲೀಸರ ನಡುವಿನ ಸಂಘರ್ಷದ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಧಿಕಾರಿ ನಿಷ್ಕ್ರಿಯರಾಗಿದ್ದು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ ಕಲ್ಮರಡಪ್ಪ ಆರೋಪಿಸಿದರು.

ಚಿಕ್ಕಮಗಳೂರಿನಲ್ಲಿ ಪೊಲೀಸರು ಹಾಗೂ ವಕೀಲರ ನಡುವಿನ ನಡೆಯುತ್ತಿರುವ ಸಂಘರ್ಷದ ಬಗ್ಗೆ ಶಾಸಕರು ನಿಷ್ಕ್ರಿಯರಾಗಿದ್ದು ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಜಿಲ್ಲೆಗೆ ನೇತಾರರೇ ಇಲ್ಲದಂತಾಗಿದೆ.ಈ ಜ್ವಲಂತ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಾಗಿರಬಹುದು, ಶಾಸಕರಾಗಿರಬಹುದು ಯಾವ ಕ್ರಮ ಕೈಗೊಂಡಿದ್ದೀರಾ..? ಇದು ನಿಮ್ಮ ಕರ್ತವ್ಯ ಅಲ್ಲವಾ..  ಜವಾಬ್ದಾರಿ ಅಲ್ಲವಾ..  ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ ಕಲ್ಮರಡಪ್ಪ ತೀವ್ರ ವಾಗ್ದಾಳಿ ನಡೆಸಿದರು. ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಹಾ ನಿಷ್ಕ್ರಿಯರಾಗಿದ್ದು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ, ಈ ರೀತಿಯ ಸಮಸ್ಯೆ ಎದುರಾದಾಗ ಸಿ.ಟಿ ರವಿ ಮಧ್ಯಸ್ಥಿಕೆ ವಹಿಸುತ್ತಿದ್ದರು ಕಾಂಗ್ರೆಸ್ ನಾಯಕರಿಗೆ ಇದರ ಪರಿಕಲ್ಪನೆಯೇ ಇಲ್ಲ ಎಂದ ಕಲ್ಮರಡಪ್ಪ ಕಾಟಾಚಾರಕ್ಕೆ ಉಸ್ತುವಾರಿ ಸಚಿವರು ಬರವೀಕ್ಷಣೆ ಮಾಡಿದ್ದಾರೆ ಬಿಡಿಗಾಸು ಇದುವರೆಗೂ ಕೊಟ್ಟಿಲ್ಲ ರಾಜ್ಯ ಮುಖಂಡರ ಜೊತೆ ಮಾತನಾಡಲು ಧೈರ್ಯ ಇಲ್ಲದಿದ್ದರೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಎಂದು ಸವಾಲು ಹಾಕಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!