May 5, 2024

MALNAD TV

HEART OF COFFEE CITY

ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಜಿಲ್ಲಾ ಬಿ.ಜೆ.ಪಿ ಯಿಂದ ಅಭಿನಂದನೆ

1 min read
District BJP congratulates new chief minister Basavaraj Bommai

District BJP congratulates new chief minister Basavaraj Bommai

ಚಿಕ್ಕಮಗಳೂರು – ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ಅವರಿಗೆ ಜಿಲ್ಲಾ ಬಿಜೆಪಿ ಅಭಿನಂದನೆ ಸಲ್ಲಿಸುತ್ತದೆ ಎಂದು ಜಿಲ್ಲಾ ವಕ್ತಾರರಾದ ವರಸಿದ್ಧಿ ವೇಣುಗೋಪಾಲ್ ತಿಳಿಸಿದ್ದಾರೆ.

District BJP congratulates new chief minister Basavaraj Bommai
District BJP congratulates new chief minister Basavaraj Bommai

ಒಬ್ಬ ಅನುಭವಿ ಮಾಜಿ ಮುಖ್ಯಮಂತ್ರಿಗಳ ಪುತ್ರ ಇವರನ್ನು ರಾಷ್ಟೀಯ ಸಂಸದೀಯ ಮಂಡಳಿ ಆಯ್ಕೆ ಮಾಡಿದೆ ಇದನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ. ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ರೈತರ, ಮಕ್ಕಳ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದ್ದಾರೆ. ಅದೇ ರೀತಿ ವಿಧವೆಯರಿಗೆ ಮಾಸಾಶನವನ್ನು 600 ರಿಂದ 800 ರ ವರೆಗೆ ಏರಿಸಿ ಸುಮಾರು 15ಲಕ್ಷ ಜನರಿಗೆ ಈ ಉಪಯೋಗವಾಗಲಿದೆ.

ವಿಕಲಚೇತನರಿಗೂ ಪ್ರೊತ್ಸಾಹ ಧನವನ್ನು 600 ರಿಂದ 800 ರ ವರೆಗೆ ಏರಿಕೆ ಮಾಡುವ ಮೂಲಕ ಸುಮಾರು 4 ಲಕ್ಷ ಜನರಿಗೆ ಈ ಉಪಯೋಗವಾಗಲಿದೆ. ಸಂಧ್ಯಾ ಸುರಕ್ಷಾ ಯೋಜನೆ ಹಣವನ್ನು 1200 ರೂಗಳಿಗೆ ಏರಿಕೆ ಮಾಡಿ 863.52 ಕೋಟಿ ಮೀಸಲಿರಿಸಿದ್ದಾರೆ. ವಿಧವಾ ವೇತನಕ್ಕೆ 416 ಕೋಟಿ ಮೀಸಲು, ರೈತರ ಮಕ್ಕಳ ಸ್ಕಾಲರ್ಶಿಪ್ ಗೆ 1000 ಕೋಟಿ ಮೀಸಲಿರಿಸಿದ್ದಾರೆ.

ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಸಂಪುಟ ಸಚಿವ ಸಭೆಯಲ್ಲಿ ಈ ಎಲ್ಲಾ ತೀರ್ಮಾನಗಳನ್ನು ಕೈಗೊಂಡಿರುವುದನ್ನು ನೋಡಿದರೆ ಉಳಿದ ಅವಧಿಯಲ್ಲಿ ಉತ್ತಮವಾದಂತ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ  ಅನುಮಾನವೇ ಇಲ್ಲ, ಇವರ ಅವಧಿಯಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಲೆಂದು ಜಿಲ್ಲಾ ಬಿಜೆಪಿ ಹಾರೈಸುತ್ತದೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!