May 4, 2024

MALNAD TV

HEART OF COFFEE CITY

ಮಹಾವೀರ ಜಯಂತಿ ಅಂಗವಾಗಿ ಕೃತಕ ಕಾಲು ಜೋಡಣೆ ವಿತರಣೆ

1 min read

ಚಿಕ್ಕಮಗಳೂರು-ಮಹಾವೀರ್ ಜಯಂತಿ ಅಂಗವಾಗಿ ಜೈನ್ ಶ್ವೇತಾಂಬರ ಮಹಿಳಾ ಮಂಡಲ ವತಿಯಿಂದ ಅಂಗವಿಕಲರಿಗೆ ಉಚಿತವಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಜೈನ್ ಸಮುದಾಯ ಭವನದಲ್ಲಿ ನೆರೆವೇರಿಸಲಾಯಿತು.
ಜೈನ್ ಶ್ವೇತಂಬರ ಮಹಿಳಾ ಸಂಘದ ಅಧ್ಯಕ್ಷೆ ನರಿತಾಗಾದಿಯಾ ಮಾತನಾಡಿ ಮಹಾವೀರ್ ಜಯಂತಿ ಪ್ರಯುಕ್ತ ಜೈನ್ ಶ್ವೇತಾಂಬರ ಮಹಿಳಾ ಸಂಘದಿAದ ಉಚಿತವಾಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಪ್ರತಿ ವರ್ಷ ಮಹಾವೀರ್ ಜಯಂತಿಯ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ನಡೆಸಲಾಗುತಿತ್ತು, ಈ ಬಾರಿ ವಿಶೇಷವಾಗಿ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ, ಇದು ೨ ದಿನದ ಕಾರ್ಯಕ್ರಮ ಆಗಿರುವುದರಿಂದ ಎಲ್ಲರು ಇದರ ಉಪಯೋಗ ಪಡೆದುಕೊಳ್ಳುವುದರ ಜತೆಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ತಿಳಿಸಿದರು.ಜೈನ್ ಸಂಘದ ಅಧ್ಯಕ್ಷರಾದ ಕಾಂತಿಲಾಲ್ ಖಿವೇಸರ್ ಮಾತನಾಡಿ ಮಹಾವೀರ ಜನ್ಮ ಕಲ್ಯಾಣೋತ್ಸವದ ಪ್ರಯುಕ್ತ ಜೈನ್ ಸಂಘದ ಆಶ್ರಯದಲ್ಲಿರುವ ಮಹಿಳಾ ಮಂಡಲ ಮತ್ತು ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಶಾಖೆ ಬೆಂಗಳೂರು ಅವರಿಂದ ಕೃತಕ ಕಾಲು ಜೋಡಣೆ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ, ಜನರಿಗೆ ಒಳ್ಳೆಯದಾಗಿಲಿ ಎಂಬ ನಿಟ್ಟಿನಿಂದ ಕಾಲು ರಹಿತರಿಗೆ ಉಚಿತವಾಗಿ ಕಾಲು ಜೊಡಣೆ ಮಾಡಲಾಗುತ್ತಿದ್ದು, ಜೈನ್ ಸಂಘದ ಕಾರ್ಯಕ್ರಮವು ಜನ ಸೇವೆಗೆ ಪ್ರಾಮುಖ್ಯತೆ ನೀಡಿ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ ಎಂದರು.

ಜೈನ್ ದೇವಸ್ಥಾನದ ಕಾರ್ಯದರ್ಶಿ ಸಂಜಯ್ ಜೈನ್ ಮಾತನಾಡಿ ಮಹಾವೀರ್ ಜಯಂತಿ ಪ್ರಯುಕ್ತ ಜೈನ್ ಸಂಘದ ಅಂಗವಾದ ಶ್ವೇತಂಬರ ಮಹಿಳಾ ಸಂಘದ ವತಿಯಿಂದ ಕೃತಕ ಕಾಲು ಜೊಡಣೆ ಶಿಬಿರವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಂದು ಜೀವಿಗೆ ತನ್ನ ದೇಹದ ಪ್ರತಿಯೊಂದು ಅಂಗವು ಅತಿ ಮುಖ್ಯವಾದದ್ದು, ಒಂದು ಅಂಗ ಇಲ್ಲವಾದರು ಜೀವನ ಸಾಗಿಸಲು ಕಷ್ಟವಾಗುತ್ತದೆ, ಇಂತಹ ಸಂದರ್ಭದಲ್ಲಿ ಮಹಿಳಾ ಸಂಘದ ವತಿಯಿಂದ ಕೃತಕ ಕಾಲು ಜೊಡಣೆ ಶಿಬಿರವನ್ನು ನಡೆಸುತ್ತಿರುವುದು ಒಂದೊಳ್ಳೆಯ ವಿಷಯವಾಗಿದೆ, ೬೦ ರಿಂದ ೭೦ ಜನ ಫಲಾನುಭವಿಗಳು ಬಂದಿದ್ದು, ಮರುದಿನವು ಶಿಬಿರ ಇರುವುದರಿಂದ ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿ, ಕರ್ನಾಟಕ ಮಾರವಾಡಿ ಫೆಡರೇಶನ್ ಬೆಂಗಳೂರಿನ ಜೈನ್ ಸಂಘದವರು ಬಹಳ ವರ್ಷಗಳಿಂದ ಮುನುಷ್ಯನ ಸೇವೆ ಒಂದು ಮುಖ್ಯ ಕಾರ್ಯ ಎಂದು ಭಾವಿಸಿ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ ಎಂದರು.

ಜೈನ್ ಶ್ವೇತಂಬರ ಮಹಿಳಾ ಸಂಘದ ಪೂರ್ವ ಅಧ್ಯಕ್ಷೆ ಮಂಜುಳಾಬನ್ಸಾಲಿ ಮಾತನಾಡಿ ಮಹಾವೀರ್ ಭಗವಾನ್ ರವರ ಜನ್ಮ ದಿನೋತ್ಸವದ ಅಂಗವಾಗಿ, ಮಹಿಳಾ ಮಂಡಲ ವತಿಯಿಂದ ಎರಡು ದಿನದ ಶಿಬಿರವನ್ನು ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಕೃತಕ ಕಾಲು ಜೊಡಣೆಯನ್ನು ಮಾಡಲಾಗುತ್ತಿದೆ, ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆಯಬೇಕು, ಮಹಾವೀರ್ ಭಗವಾನ್ ರವರ ಕೃಪೆಯಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಜನರಿಗೆ ಉಪಯೋಗವಾಗಿ ಅವರ ಜೀವನಕ್ಕೆ ಬೆಂಬಲ ಸಿಗುವಂತಾಗಲಿ ಎಂದರು.ಈ ಸಂದರ್ಭದಲ್ಲಿ ಜೈನ್ ಸಂಘದ ಕಾರ್ಯದರ್ಶಿ ರಮೇಶ್‌ಖಿವೇಸರ್, ಮುಖಂಡರುಗಳಾದ ಲಾಲ್‌ಚಂದ್ ಜೈನ್, ಮಹೇಂದ್ರ ಸಿಯಾಲ್, ದೀಪಕ್‌ದುಗಡ, ಜಸ್ವಂತ್‌ಡೋಸಿ, ಗೌತಮ್‌ಚಂದ್ ಸಿಯಾಲ್, ಮಹಿಳಾ ಸಂಘದ ಕಾರ್ಯದರ್ಶಿ ನಿತಾಖಿವೇಸರ್, ಗೀತಾಸೋನಾಲಿಕ, ದೀಪಿಕಪಿರ್ಗಲ್, ಶಾಮತಿದೇವಿ ಮತ್ತಿತತರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!