ಪೌರಕಾರ್ಮಿಕರಿಗೆ ಆರೋಗ್ಯ ಕಿಟ್ ವಿತರಣೆ
1 min readಚಿಕ್ಕಮಗಳೂರು : ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರಸಭೆ ಪೌರಕಾರ್ಮಿಕರಿಗೆ ಹಾಗೂ ವಾಹನ ಚಾಲಕರಿಗೆ ನಗರ ಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ರವರ ಸೂಚನೆಯ ಮೇರೆಗೆ ನಗರಸಭೆಯಲ್ಲಿ ಶಾಸಕ ಸಿ.ಟಿ. ರವಿ ವಿತರಣೆ ಮಾಡಿದರು.
ರೈನ್ ಕೋಟ್, ಶೂಸ್, ಟವಲ್, ಮಾಸ್ಕ್, ಕಾರ್ಬಾಲಿಕ್ ಸೋಪ್, ರಿಫ್ಲೆಕ್ಟೀವ್ ಜಾಕೆಟ್, ಹ್ಯಾಟ್, ಗಂಬೂಟ್, ಹಾಗೂ ಪೌರ ಕಾರ್ಮಿಕರ ಬಳಕೆಯ ಇನ್ನಿತರ 29 ವಸ್ತುಗಳುಳ್ಳ ಕಿಟ್ಟನ್ನು ಪೌರಕಾರ್ಮಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನೀಡಲಾಯಿತು.
ಈ ವೇಳೆ ನಗರಸಭೆಯ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಪೌರಾಯುಕ್ತರದ ಬಸವರಾಜ್, ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ ಹಾಗೂ ನಗರ ಸಭೆಯ ಸದಸ್ಯರುಗಳು ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g