ಡಿ. 02, 03 ರಂದು ‘ರ್ಯಾಲಿ ಆಫ್ ಚಿಕ್ಕಮಗಳೂರು’ ಚಾಂಪಿಯನ್ ಶಿಪ್
1 min readಚಿಕ್ಕಮಗಳೂರು: 4 ನೇ ಸುತ್ತಿನ ದಕ್ಷಿಣ ವಲಯದ ಭಾರತೀಯ ಟಿ.ಎಸ್.ಡಿ. ಚಾಂಪಿಯನ್ ಶಿಪ್ ರ್ಯಾಲಿಯನ್ನು ಡಿ. 2 ಮತ್ತು 3 ರಂದು ಆಯೋಜಿಸಲಾಗಿದೆ ಎಂದು ಚಿಕ್ಕಮಗಳೂರು ಮೋಟಾರ್ಸ್ ಸ್ಪೋರ್ಸ್ಟ್ ಕ್ಲಬ್ ನ ಅಧ್ಯಕ್ಷರಾದ ಜಯಂತ್ ಪೈ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಂಸಿ ಮೆಲ್ಲ ಸ್ಪೋರ್ಟ್ ಫೌಂಡೇಶನ್, ಬೈನರಿ ಎಕೋಟಿಕಾ ಮತ್ತು ಆರೆಂಜ್ ಅಡ್ವೆಂಚರ್ ಇವರುಗಳ ಸಹಪ್ರಾಯೋಜಕತ್ವದಲ್ಲಿ ರ್ಯಾಲಿಯನ್ನು ನಡೆಸಲಾಗುತ್ತಿದೆ. ಈ ಚಾಂಪಿಯನ್ಶಿಪ್ ಅನ್ನು ಪ್ರೊಸೋಟ್ಸ್ ಬೆಂಗಳೂರು ಪ್ರಾಯೋಜನೆ ಮಾಡಿದೆ. ಈ ರ್ಯಾಲಿಯು ಮುಖ್ಯವಾಗಿ ಡಿಸೆಂಬರ್ 2 ಮತ್ತು 3 ರಂದು ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಳಲ್ಲಿ ನಡೆಯಲಿದೆ ಎಂದು ಹೇಳಿದರು.
ಈ ರ್ಯಾಲಿಯುಲ್ಲಿ ಮುಖ್ಯವಾಗಿ ನ್ಯಾವಿಗೇಷನಲ್ ಸ್ಕಿಲ್, ಸಮಯ ಮತ್ತು ಲೆಕ್ಕಾಚಾರಗಳ ಬಗ್ಗೆ ಆಗಿರುತ್ತದೆ. ರ್ಯಾಲಿ ಒಟ್ಟು 125 ಕಿ.ಮೀ. ದೂರ ಕ್ರಮಿಸಲಿದೆ. ಡಿಸೆಂಬರ್ 2 ರಂದು ಬೈನರಿ ಎಕೋಟಿಕಾ ರೆಸಾರ್ಟ್ ನಲ್ಲಿ ಸಂಜೆ 5 ಗಂಟೆಗೆ ಸಮಾರಂಭದ ಫ್ಲಾಗ್ ಆಫ್ ನಡೆಯಲಿದೆ ಮತ್ತು ರ್ಯಾಲಿ ಪ್ರಾರಂಭವು ಡಿಸೆಂಬರ್ 3 ರಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ. ರ್ಯಾಲಿಯು ಚಿಕ್ಕಮಗಳೂರು ಪಟ್ಟಣದ ಸುತ್ತಲೂ ಸಂಚರಿಸುತ್ತಾ, ಬೈನರಿ ಎಕ್ಕೋಟಿಕಾ ರೆಸಾರ್ಟ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಕೊನೆಗೊಳ್ಳಲಿದೆ ಮತ್ತು ಬಹುಮಾನ ವಿತರಣಾ ಸಮಾರಂಭವು ಅದೇ ಸ್ಥಳದಲ್ಲಿ ನಡೆಯಲಿದೆ. ವಿಜೇತರು 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಟ್ರೋಫಿಗಳನ್ನು ಮತ್ತು ನಗದು ಬಹುಮಾನವನ್ನು ತೆಗೆದುಕೊಳ್ಳುತ್ತಾರೆ ಎಂದ ಅವರು ಈ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿದ್ದು ಭಾರತದಾದ್ಯಂತ ಸ್ಪರ್ಧೆಗಳು ಭಾಗವಹಿಸಲಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g