April 28, 2024

MALNAD TV

HEART OF COFFEE CITY

ಡಿ.ಕೆ. ಅಲ್ಲ ಕೇಡಿ ಮಾಜಿ ಸಚಿವ ಸಿ.ಟಿ. ರವಿ ಟಾಂಗ್

1 min read

ಚಿಕ್ಕಮಗಳೂರು : ಸಿ.ಟಿ.ರವಿ ಲೂಟಿ ರವಿ ಎಂಬ ಹೇಳಿಕೆ ಹಿನ್ನೆಲೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹಂಗಾದ್ರೆ ನಿಮ್ಮ ಡಿಕೆ ತೆಗೆದು ನಿಮ್ಮನ್ನ ಕೇಡಿ ಅನ್ನಬಹುದಲ್ವ ಎಂದು ಮಾಜಿ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. 

ಚಿಕ್ಕಮಗಳೂರಿನ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಅವರು ಕೇಡಿ ತರ ಆಡಬಾರದ. ಕೇಡಿಯ ರೀತಿಯಲ್ಲಿ ನಡೆದುಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ, ಅವರು ಕೆಡಿ ರೀತಿ ನಡೆದುಕೊಳ್ಳುವುದು ಪಕ್ಷ-ರಾಜ್ಯ ಎರಡಕ್ಕೂ ಒಳ್ಳೆಯದಲ್ಲ ಎಂದರು. ಐಟಿ ದಾಳಿ ಸಂಬಂಧಿಸಿದಂತೆ ಕಾಂಗ್ರೆಸ್ ನವರದೇ ಬೇನಾಮಿ ಹಣ ಅಂತ ನಮಗೆ ವರದಿ ಬಂದಿದೆ. ಇವ್ರುಗಳೇ ನಂಬರ್ 1, ನಂಬರ್ 2 ಆಗಿರಬಹುದು ಬೇನಾಮಿಗಳ ಮೂಲಕ ಹಣ ಸಂಗ್ರಹಿಸಿರಬಹುದು ಎಂಬುವುದು ನಮಗೆ ಬಂದಿರುವ ಮಾಹಿತಿ ಅಷ್ಟೇ. ನಮ್ಮ ಈ ಆರೋಪವನ್ನ ನಿರಾಕರಿಸುವ ಅಧಿಕಾರ ಅವರಿಗಿದೆ. ಆದರೆ ನಿರಾಕರಿಸುವ ಬರದಲ್ಲಿ ಕುಮಾರಸ್ವಾಮಿ ಅವ್ರಿಗೆ ನಕಲಿ ಸ್ವಾಮಿ ಅಂತ ಹೇಳೋದು, ಆಶ್ವಥ್ ನಾರಯಣ್ ಅವ್ರಿಗೆ ನವರಂಗಿ ನಾರಯಾಣ ಅನ್ನೋದು, ನನಗೆ ಸಿ .ಟಿ. ತೆಗೆದು ಲೂಟಿ ಅನ್ನೋದು ಹಂಗಾದ್ರೆ ನಿಮ್ಮ ಡಿಕೆ ತೆಗೆದು ಕೇಡಿ ಅನ್ನಬಹುದಲ್ವ ಅಂತ ತಿರುಗೇಟು ನೀಡಿದರು.
ಡಿ.ಕೆ. ಶಿವಕುಮಾರ್ ಅವರು ಕೇಡಿ ಮನಸ್ಥಿತಿಯಲ್ಲಿ ವಿವರಿಸುವುದನ್ನ ಬಿಡಬೇಕು. ಉಪಮುಖ್ಯಮಂತ್ರಿ ತಮಗಿರುವ ಜವಬ್ದಾರಿಯ ಅರಿವಿಟ್ಟು ನಡೆದುಕೊಳ್ಳೋಬೇಕು ಅದನ್ನ ಬಿಟ್ಟು ಹೆದರಿಸುವ, ಬೆದರಿಸುವ, ರಾಜಕಾರಣ ಮಾಡುವುದು ಯಾಕೆ..? ಇಲ್ಲಿ ಹೆದರೋಕೆ-ಬೆದರೋಕೆ ಯಾರಿದ್ದಾರೆ. ಅವ್ರೆನೂ ರಾಕ್ಷಸ ವಂಶಕ್ಕೆ ಸೇರಿದವರಾ? ಕೇಡಿ ವಂಶಕ್ಕೆ ಸೇರಿದವ್ರಾ? ಎಂದು ಪ್ರಶ್ನಿಸಿದರು.
ಇಷ್ಟಕ್ಕೂ ನನ್ನ ಅಸ್ತಿ ಸಾವಿರಾರು ಕೋಟಿ ಎನಿಲ್ಲಾ… ಲೂಟಿ ಯಾರು ಮಾಡಿದ್ದಾರೆ ಅನ್ನೋದನ್ನ ರಾಜ್ಯದ ಜನರಿಗೆ ಗೊತ್ತಿದೆ‌. ಅಜಗಜಾಂತರ ವ್ಯತ್ಯಾಸ ಆಗಿರುವುದು ಯಾರದ್ದು ಡಿ.ಕೆ. ಶಿವಕುಮಾರ್ ಅವ್ರೆ, ನೀವು ಏನು ಮಾತನಾಡ್ತೀರೋ ಅದು ನಿಮಗೆ ಅನ್ವಯವಾಗುತ್ತದೆ ಎಂದು ಟಾಂಗ್ ನೀಡಿದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!