May 2, 2024

MALNAD TV

HEART OF COFFEE CITY

ಮಗಳನ್ನು ದಂಧೆಗೆ ದೂಡಿದ ದುರುಳ ತಾಯಿ ತಪ್ಪಿತಸ್ತೆ: ತ್ವರಿತಗತಿ ಕೋರ್ಟ್ ತೀರ್ಪು

1 min read

ಚಿಕ್ಕಮಗಳೂರು: ಶೃಂಗೇರಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ದೋಷಿ ಎಂದು ಚಿಕ್ಕಮಗಳೂರು ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ. 48 ಜನರನ್ನು ಖುಲಾಸೆಗೊಳಿಸಿದ್ದು, ತಪ್ಪಿತಸ್ತರಿಗೆ ಶಿಕ್ಷೆ ಪ್ರಮಾಣವನ್ನು ಮಾರ್ಚ್ 11 ಕ್ಕೆ ಪ್ರಕಟಿಸಲಾಗುವುದು. 

ಶೃಂಗೇರಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ತಾಯಿಯೇ ದೋಷಿ ಎಂದು ಚಿಕ್ಕಮಗಳೂರು ಶೀಘ್ರಗತಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿದ್ದ 48 ಜನರನ್ನು ಖುಲಾಸೆಗೊಳಿಸಲಾಗಿದ್ದು, ಬಾಲಕಿ ತಾಯಿ ಗೀತ ದೇವಿಚರಣ್, ಸ್ಮಾಲ್ ಅಭಿ, ಗಿರೀಶ್ ರನ್ನು ತಪ್ಪಿತ್ತಸ್ತರು ಎಂದು ನ್ಯಾಯಾಲಯ ಆದೇಶಿಸಿದೆ.
ಕಳೆದ ಮೂರು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು, ಶೃಂಗೇರಿಯ ಗೋಚವಳ್ಳಿ ಸಮೀಪ ಮನೆಯಲ್ಲಿ ದಂಧೆ ನಡೆಸುತ್ತಿದ್ದ ಹೆತ್ತ ತಾಯಿಯ ಅರೋಪ ಸಾಬೀತಾಗಿದ್ದು ಫೋಕ್ಸೋ ಪ್ರಕರಣ ದಾಖಲಾಗಿತ್ತು, ನೂರಾರು ಜನರನ್ನು ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು, ಚಿಕ್ಕಮಗಳೂರಿಂದ ವರ್ಗಾವಣೆಗೊಂಡ ಹೆಚ್ಚುವರಿ ಎಸ್ಪಿ ಶೃತಿ ಈ ಕೇಸ್ ನಲ್ಲಿ ಆರೋಪಿಗಳ ಜಾಡು ಹಿಡಿದು ತನಿಖೆ ನಡೆಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!