ಮಾರ್ಚ್ 8ರಿಂದ ಕ್ರಿಕೆಟ್ ಪ್ರೇಮಿಗಳಿಗೆ ಒಂದು ವಾರ ಚಿಕ್ಕಮಗಳೂರಿನಲ್ಲಿ ಸಿ.ಪಿ.ಎಲ್ ಕ್ರಿಕೆಟ್ ಹಬ್ಬ
1 min readಚಿಕ್ಕಮಗಳೂರು: ಚಿಕ್ಕಮಗಳೂರು ಪ್ರೀಮಿಯರ್ ಲೀಗ್ ಟಿ-20 5ನೇ ಆವೃತ್ತಿಯ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮಾ.8 ರಿಂದ ಆರಂಭಗೊಳ್ಳಲಿದ್ದು, ಆಟಗಾರರ ಹರಾಜು ಪ್ರಕ್ರಿಯೇ ನಡೆಯಿತು.ಗುರುವಾರ ನಗರದ ಹೊರವಲಯದ ಸಿರಿ ಕಾಫಿಯಲ್ಲಿ ಹಮ್ಮಿಕೊಂಡಿದ್ದ ಹರಾಜ ಪ್ರಕ್ರಿಯೆ ಉದ್ಘಾಟನಾ ಸಮಾರಂಭವನ್ನು ರಾಣ ಸ್ಪೋಟ್ರ್ಸ್ ಕ್ಲಬ್ನ ಕಾರ್ಯದರ್ಶಿ ಎ.ಬಿ.ಸುದರ್ಶನ್ ಗಿಡಕ್ಕೆ ನೀರೆ ಯುವ ಮೂಲಕ ಉದ್ಘಾಟಿಸಿದರು.
ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಆಟಗಾರರು ಹರಾಜು ಪ್ರಕ್ರಿಯೇಯಲ್ಲಿ ಪಾಲ್ಗೊಂಡಿದ್ದು, 5 ಪ್ರಾಂಚೈಸಿಗಳನ್ನು ಹೊಂದಿದೆ. ಪ್ರತಿ ತಂಡವು ತಮ್ಮ ಪ್ರಬಲ್ಯವನ್ನು ಕಟ್ಟುವ ಸಲುವಾಗಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ಎ.ಬಿ.ಸುದರ್ಶನ್ ತಿಳಿಸಿದರು.
ಮಾ.8 ರಿಂದ ಕ್ರಿಕೆಟ್ ಪಂದ್ಯಗಳು ಪ್ರಾರಂಭವಾಗಲಿದ್ದು ಒಂದು ವಾರಗಳ ಕಾಲ ಕ್ರಿಕೆಟ್ ಪ್ರೇಮಿಗಳು ಮತ್ತು ಜಿಲ್ಲೆಯ ಜನತೆಗೆ ಆಟಗಾರರು ಕ್ರಿಕೆಟ್ ಹಬ್ಬದ ಸಿಹಿಯನ್ನು ಉಣಬಡಿ ಸಲಿದ್ದಾರೆ ಎಂದರು.ಹಾರಾಜು ಪ್ರಕ್ರಿಯೇ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ರಾಣ ಸ್ಪೋಟ್ರ್ಸ ಕ್ಲಬ್ನ ಖಜಾಂಚಿ ಗೋಪಾಲ್ಗೌಡ, ನಗರಸಭೆ ಸದಸ್ಯ ಟಿ.ರಾಜಶೇಖರ್, ಆಯೋಜಕ ಮಾಸ್ಟರ್ ನಟರಾಜ್ ಮತ್ತು ಹರೀಶ್ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g