April 29, 2024

MALNAD TV

HEART OF COFFEE CITY

ಕಾಂಗ್ರೆಸ್ ಸ್ವಾರ್ಥಕ್ಕಾಗಿ ಅಧಿವೇಶನ ಬಲಿ: ಕಲ್ಮರುಡಪ್ಪ

1 min read

 

ಚಿಕ್ಕಮಗಳೂರು: ವಿಧಾನಸಭೆಅಧಿವೇಶನವನ್ನು ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿಬಲಿಕೊಟ್ಟಿದೆ. ವೈಚಾರಿಕ ಮತ್ತು ಬೌದ್ಧಿಕ ದಿವಾಳಿತದಿಂದಕಲಾಪವನ್ನು ಹಾಳು ಮಾಡಿದೆ. ಕಾಂಗ್ರೆಸ್ ಇದನ್ನುಮುಂದೂವರೆಸಿದರೇ ಬೂತ್‍ಮಟ್ಟದಲ್ಲಿ ಕಾಂಗ್ರೆಸ್ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷಎಚ್.ಸಿ.ಕಲ್ಮುರುಡಪ್ಪ ಎಚ್ಚರಿಸಿದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿಮಾತನಾಡಿ, ಹಿಜಾಬ್ ವಿಯದಲ್ಲಿ ಗೊಂದಲದ ನಿಲುವಿನಿಂದಪಕ್ಷಕ್ಕಾದ ಹಾನಿಯನ್ನು ಸರಿಪಡಿಸಿಕೊಳ್ಳಲು ಜನರಗಮನವನ್ನು ಬೇರೆಡೆಗೆ ಸೆಳೆಯುವ
ಉದ್ದೇಶದಿಂದ ಕಾಂಗ್ರೆಸ್ ಅಧಿವೇಶವನ್ನು ವ್ಯರ್ಥಮಾಡಿ ರಾಜ್ಯದ ಜನರಿಗೆ ದ್ರೋಹ ಮಾಡಿದೆ ಎಂದುಆರೋಪಿಸಿದರು.ಮೇಕೆದಾಟು ಪಾದಯಾತ್ರೆ ಚುನಾವಣೆಯ ಗಿಮಿಕ್ಆಗಿದೆ. ಹಿಂದೂ ಪರ ಹೋರಾಟ ಬಜರಂಗದಳಮುಖಂಡದ ಹರ್ಷ ಕೊಲೆಯಾಗಿದ್ದು, ಕಾಂಗ್ರೆಸ್ಮುಖಂಡರು ಹರ್ಷನ ಹತ್ಯೆ ವಿಚಾರದಲ್ಲಿ ಚಕಾರಎತ್ತರಿದುವುದು ಹಿಂದೂ ಸಮಾಜಕ್ಕೆ ಮಾಡಿದಅಪಮಾನ ವಾಗಿದೆ ಎಂದು ದೂರಿದರು.ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನುಗಮನಿಸಿದಾಗ ಅವರ ಮಸ್ಥಿತಿ ಮತಬ್ಯಾಂಕ್ ಹೊರತುದೇಶವಲ್ಲ ಎಂಬುದು ಅರ್ಥವಾಗುತ್ತದೆ. ಇಂತಹಓಲೈಕೆ ರಾಜಕಾರಣ ತುಂಬ ದಿನ ಉಳಿ ಯಲುಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ದೇಶ ಹಾಗೂ ರಾಜ್ಯದಜನತೆಗೆ ಮಾಡಿದ ಅನ್ಯಾಯ ವನ್ನು ಜನತೆ ಸಹಿಸಲುಸಾಧ್ಯವಿಲ್ಲ ಎಂದು ತಿಳಿಸಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!